ಸುದ್ದಿ

ನವಲಗುಂದ: ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

Share It

ನವಲಗುಂದ: ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ಬೆಳೆಹಾನಿಯಾಗಿದ್ದು ಬೆಳೆಹಾನಿ, ಪರಿಹಾರ, ಬೆಳೆವಿಮೆ ಹಣ ನೀಡುವಂತೆ ಆಗ್ರಹಿಸಿ ಗುರುವಾರ ದಿವಸ ಕರ್ನಾಟಕ ರೈತ ಸೇನೆ ವತಿಯಿಂದ ರಸ್ತೆ ತಡೆನಡೆಸಿದರು.

ಇದಕ್ಕೆ ಪಕ್ಷಾತೀತ ರೈತ ಒಕ್ಕೂಟ ಸಮಿತಿಯವರು ಜೊತೆಗೂಡಿ ರೈತಭವನದಿಂದ ಪ್ರತಿಭಟನೆ ಹೊರಟು ತಹಸೀಲ್ದಾರ ಆಗಮಿಸಿ ತಹಸೀಲ್ದಾರ ಸುಧೀರ ಸಾವುಕಾರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಗೆ ಮನವಿ ಸಲ್ಲಿಸಿದರು.

-ಈ ವೇಳೆಯಲ್ಲಿ ಪಕ್ಷಾತೀತ ರೈತ ಒಕ್ಕೂಟ ಸಮಿತಿಯ ಅಧ್ಯಕ್ಷ ಲೋಕನಾಥ ಹೆಬಸೂರ ಮಾತನಾಡಿ ತಾಲೂಕಿನಲ್ಲಿ ರೈತರು ಅತಿಹೆಚ್ಚು ಹೆಸರು ಬೆಳೆಯನ್ನು ಬಿತ್ತನೆಮಾಡಿದ್ದು, ಈ ವರ್ಷ ಅತಿಹೆಚ್ಚು ಮಳೆ ಬಿದ್ದಿದರಿಂದ ಸಂಪೂರ್ಣ ಬೆಳೆನಾಶವಾಗಿದೆ ತಾಲೂಕಿನಲ್ಲಿರುವ ಪ್ರಮುಖ ಹಳ್ಳಗಳು ತುಂಬಿ ಪ್ರವಾಹ ಬಂದು ಅಕ್ಕಪಕ್ಕದ ಜಮೀನುಗಳಲ್ಲಿ ನೀರುನುಗ್ಗಿ ಹಾನಿಯಾಗಿದ್ದಲ್ಲದೆ ಜಮೀನನಲ್ಲಿಯ ಕೃಷಿ ಸಾಮಾನುಗಳು, ಪಂಪ್ ಶೆಟ್, ಪೈಪುಗಳ ಮುಳುಗಡೆಯಾಗಿವೆ, ಕೃಷಿ ಹೊಂಡಗಳು ಮುಚ್ಚಿಹೋಗಿವೆ, ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿವೆ. ರೈತರಿಗೆ ಮರುಬಿತ್ತನೆ ಮಾಡಲಿಕ್ಕೆ ಬೀಜಗೊಬ್ಬರ ಬಿತ್ತನೆ ಖರ್ಚುಗಳಿಗೆ ವಿಪತ್ತು ಪರಿಹಾರದ ಎಸ್ ಡಿಆರ್ ಎಫ್ ಹಾಗೂ ಎನ್ ಡಿಆರ್ ಎಫ್ ಅಡಿಯಲ್ಲಿ ಪರಿಹಾರ ಒದಗಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

-ನಂತರ ಕರ್ನಾಟಕ ರೈತ ಸೇನೆ ರಾಜ್ಯಧ್ಯಕ್ಷರಾದ ಶಂಕರ ಅಂಬಲಿ ಮಾತನಾಡಿ ತಾಲೂಕಿನಲ್ಲಿ ಬೆಣ್ಣೆ ಹಳ್ಳದಿಂದ ಮಾತ್ರ ಹಾನಿಯಾಗಿಲ್ಲಾ ಉಳಿದ ತುಪ್ಪರಿ ಹಳ್ಳ,ಗದನಿ ಹಳ್ಳ ಅಲ್ಲದೇ ತಾಲೂಕಿನ 56 ಹಳ್ಳ ಗಳಿಂದ ಆದಹಾನಿ ಬಹಳ, ಗದನಿಹಳ್ಳ ಪ್ರವಾಹವಾಗಿ ಬಂದು ಹೆಬ್ಬಾಳ-ಅಳಗವಾಡಿ ಹತ್ತಿರ ತುಪ್ಪರಿಹಳ್ಳಕ್ಕೆ ಸೇರುತ್ತದೆ ಕಾರಣ ಸರ್ಕಾರ ಪ್ರವಾಹದ ಹಳ್ಳಗಳಲ್ಲಿ ಗದನಿ ಹಳ್ಳವನ್ನು ಪರಿಗಣಿಸಬೇಕು ಅಲ್ಲದೇ ಈ ಹಳ್ಳದದಿಂದ ಬೆಳೆಹಾನಿಯಾಗಿದ್ದು ಪರಿಹಾರ ನೀಡಲು ಒತ್ತಾಯಿಸುತ್ತೇವೆ.
ಅಲ್ಲದೇ ಶೀಘ್ರದಲ್ಲಿ ಜಿಲ್ಲಾಡಳಿತ ತುರ್ತುಸಭೆ ನಡೆಸಿ ಸರ್ಕಾರದಿಂದ ಹಾನಿ ದೊರಕಿಸುವ ಕಾರ್ಯಮಾಡಲು ಕೋರುತ್ತೇವೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

-ನಂತರ ರೈತರಾದ ದೇವೇಂದ್ರಪ್ಪ ಹಳ್ಳದ ಮಾತನಾಡಿ ಹಿಂದಲ್ಲ ವರ್ಷ ಬೆಳೆವಿಮೆ ತಾರತಮ್ಯವಾಗಿದೆ. ಅದನ್ನ ಸರಿಪಡಿಸಿ, ಬೆಳೆವಿಮೆ ತಾರತಮ್ಯಯಲ್ಲಿನ ತನಿಖೆ ಮಾಡಿ, ಬೆಳೆವಿಮೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು ವಿಮೆಹೆಸರಲ್ಲಿ ಕಂಪನಿಗಳು ಲಾಭದಲ್ಲಿವೆ, ವಿಮೆ ತುಂಬಿದ ರೈತರಿಗೆ ನಿರಂತರ ಹಾನಿಯಾಗಿರುತ್ತದೆ. ಹಾನಿಯಾದ ಕ್ಷೇತ್ರದ ಮರುಪರಿಶೀಲನೆ ಮಾಡಿ ಪರಿಹಾರ ನೀಡಬೇಕು, ತಪ್ಪಿದಲ್ಲಿ ನಿಮ್ಮ ಪರವಾಗಿ ನಾವೇ ಹಾನಿಯಾದ ರೈತರಿಂದ ಅರ್ಜಿ ಪಡೆದು ನಿಮಗೆ ಮಾಹಿತಿ ನೀಡಲಾಗುವುದು ಇದಕ್ಕೆ ತಮ್ಮ ಕಛೇರಿಯಲ್ಲಿ ರೈತರ ಪರವಾಗಿ ಕಾರ್ಯ ನಿರ್ವಹಿಸಲು ಸ್ಥಳಾವಕಾಶ ಮಾಡಿಕೊಡಿ, ಇಲ್ಲವೇ ತಾವಾದರೂ ಕೂಡಾ ತನಿಖೆ ಮಾಡಿಸಿ ಒಟ್ಟು ಹಾನಿಯ ವರದಿಯನ್ನು ಸರ್ಕಾರಕ್ಕೆ ನೀಡಿ ಪರಿಹಾರ ದೊರಕಿಸಿಕೊಡಿ ಎಂದರು.

ಬಾಕ್ಸ್
“ರೈತ ಮುಖಂಡರೊಂದಿಗೆ ಸಭೆ ನಡೆಸಿದ ತಹಶೀಲ್ದಾರ ಸುಧೀರ ಸಾವುಕಾರ ರೈತರ ಅಹವಾಲುಗಳನ್ನು ಆಲಿಸಿ ಕೂಡಲೇ ಮೇಲಾಧಿಕಾರಿಗಳಿಗೆ ಹಾಗೂ ಸರ್ಕಾರದ ಗಮನಕ್ಕೆ ತರಲಾಗುವುದು, ಹಾನಿಕುರಿತು ಸರಕಾರದಿಂದ ಯಾವುದೇ ಮಾರ್ಗಸೂಚಿ ಬಂದರು ಎಲ್ಲರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. “

ಈ ವೇಳೆಯಲ್ಲಿ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ, ತೋಟಗಾರಿಕೆ ಅಧಿಕಾರಿ ಸಂಜೀವಕುಮಾರ ಗುಡಿಮನಿ, ರಘುನಾಥರಡ್ಡಿ ನಡುವಿನಮನಿ, ಭೀಮಜಿ ಕುಲಕರ್ಣಿ, ಸಿದ್ದಲಿಂಗಪ್ಪ ಮಾಳಣ್ಣವರ, ಈರಣ್ಣ ಕರಣಿ, ಬಿ. ಎಮ್. ಹನಸಿ, ಭರಮಪ್ಪ ಕಾತರಕಿ, ಮಲ್ಲಪ್ಪ ಗಾಣಿಗೇರ, ಮಲ್ಲಪ್ಪ ಬೆಟಸೂರ, ತೀರ್ಥಪ್ಪ ರೋಣದ, ನಾಗರಾಜ ಹಡಪದ, ಭರಮಪ್ಪ ಛಲವಾದಿ ಅನೇಕ ರೈತರು ಹಾಜರಿದ್ದರು.


Share It

You cannot copy content of this page