ಅಪರಾಧ ಸುದ್ದಿ

ಬೀದರ್: ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಕರೆ: ಪೊಲೀಸರಿಂದ ಕಟ್ಟೆಚ್ಚರ

Share It

ಬೀದರ್: ಬೀದರ್‌ನ ಗುರುದ್ವಾರ ಸ್ಫೋಟಗಳೊಸಿವುದಾಗಿ ಅನಾಮಧೇಯ ಇ-ಮೇಲ್ ಬಂದಿದ್ದು, ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಬೀದರ್ ನಲ್ಲಿರುವ ಗುರುದ್ವಾರದ ಇ-ಮೇಲ್ ಗೆ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆಯ ಮೇಲ್ ಬಂದಿದ್ದು, ಗುರುದ್ವಾರ ಸ್ಫೋಟಗೊಳಿಸುವ ಬೆದರಿಕೆ ಹಾಕಿದ್ದಾರೆ.

ಇ-ಮೇಲ್ ನಿಂದ ಭಯಗೊಂಡ ಗುರುದ್ವಾರದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರದೀಪ್ ಗುಂಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಂಬ್ ನಿಷ್ಕ್ರಿಯ ದಳದಿಂದಲೂ ಶೋಧ ಕಾರ್ಯ ನಡೆಸಲಾಗಿದೆ. ಆದರೆ, ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎನ್ನಲಾಗಿದೆ,

ನೆನ್ನೆಯೂ ಇಂತಹದ್ದೇ ಇ-ಮೇಲ್ ಬಂದಿದ್ದು, ಇದೀಗ ಎರಡನೇ ಬಾರಿಗೆ ಮೇಲ್ ಬಂದಿದೆ ಎಂದು ಹೇಳಲಾಗಿದೆ. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳು ಮತ್ತು ವಸ್ತುಗಳ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಪ್ರದೀಪ್ ಗಂಟಿ ತಿಳಿಸಿದ್ದಾರೆ.


Share It

You cannot copy content of this page