ಚನ್ನರಾಯಪಟ್ಟಣ: ಮಟ್ಟನವಿಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಟ್ಟನವಿಲೆ ನೂತನ ಉಪಾಧ್ಯಕ್ಷರಾಗಿ ಮಾದಿಹಳ್ಳಿ ಎಂ. ಎಸ್. ಕಾಂತರಾಜ್ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
11 ಸದಸ್ಯರನ್ನೊಳಗೊಂಡ ಸಹಕಾರ ಸಂಘದ ಉಪಾಧ್ಯಕ್ಷ ಸ್ಥಾನ ಖಾಲಿಯಾಗಿದ್ದು, ಮಾದಿಹಳ್ಳಿಯ ಕಾಂತರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ವೇಳೆ ಅಧ್ಯಕ್ಷರಾದ ಗಂಗಾಧರ್ ಸೇರಿದಂತೆ ಎಲ್ಲ ನಿರ್ದೇಶಕರು ಭಾಗವಹಿಸಿದ್ದರು.
ಸಹಕಾರ ಸಂಘದ ಮುಂದೆ ನಿರ್ದೇಶಕರು ಹಾಗೂ ಮುಖಂಡರು ಉಪಾಧ್ಯಕ್ಷ ಕಾಂತರಾಜ್ ಅವರನ್ನು ಅಭಿನಂದಿಸಿದರು. ತಮ್ಮ ಅವಿರೋಧ ಆಯ್ಕೆಗೆ ಪಕ್ಷಾತೀತವಾಗಿ ಸಹಕರಿಸಿದ ನಿರ್ದೆಶಕರು ಮತ್ತು ಮುಖಂಡರಿಗೆ ಕಾಂತರಾಜ್ ಧನ್ಯವಾದ ಅರ್ಪಿಸಿದರು.