ಅಪರಾಧ ಸುದ್ದಿ

ಹೆಚ್ಚುತ್ತಿದೆ ಸೈಬರ್ ಖದೀಮರ ಹಾವಳಿ: ಬೆಂಗಳೂರಲ್ಲಿ ನಿತ್ಯ 4.83 ಕೋಟಿ ದೋಖಾ

Share It

ಬೆಂಗಳೂರು: ಬೆಂಗಳೂರಿನಲ್ಲಿ ಸೈಬರ್ ಖದೀಮರ ಹಾವಳಿ ಅತ್ಯಂತ ಹೆಚ್ಚಾಗಿದ್ದು, ನಿತ್ಯ ಸರಾಸರಿ 4.83 ಕೋಟಿ ರೂ. ಹಣವು ಸದ್ದಿಲ್ಲದೇ ಸೈಬರ್ ಖದೀಮರ ಪಾಲಾಗುತ್ತಿದೆ.

ಪೊಲೀಸ್ ಇಲಾಖೆ ಅಂಕಿ-ಅAಶಗಳ ಪ್ರಕಾರ 2025 ರ ನವೆಂಬರ್ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಬರೋಬ್ಬರಿ 1,543.41 ಕೋಟಿ ರೂ.ಗಳನ್ನು ಸೈಬರ್ ವಂಚಕರು ದೋಚಿದ್ದಾರೆ. ರಾಜ್ಯದಲ್ಲಿ ಸೈಬರ್ ಖದೀಮರು ವಂಚಿಸಿದ ಹಣದಲ್ಲಿ ಬೆಂಗಳೂರು ಸಿಂಹಪಾಲು ಅಂದರೆ ಅಂದಾಜು 75.69% ಹೊಂದಿದೆ.

ಸೈಬರ್ ವಂಚನೆಗೆ ಒಳಗಾಗದಂತೆ ಸಾರ್ವಜನಿಕರಿಗೆ ಅದೆಷ್ಟೇ ಮಾಹಿತಿ ನೀಡಿದ್ದರೂ, ವಂಚಕರು ವಿವಿಧ ಜಾಲಗಳಲ್ಲಿ ಸಾರ್ವಜನಿಕರನ್ನು ವಂಚನೆ ಮಾಡುತ್ತಿದ್ದಾರೆ. ಡಿಜಿಟಲ್ ಅರೆಸ್ಟ್, ವಿವಿಧ ವಸ್ತುಗಳ ಮೇಲಿನ ಆಫರ್, ಹೆಚ್ಚಿನ ಲಾಭ ಕೊಡುವ ಭರವಸೆ ನೀಡುವ ಮೂಲಕ ಜನರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ.


Share It

You cannot copy content of this page