ನವಲಗುಂದ : ಸ್ಥಳೀಯ ರಾಮಲಿಂಗ ಓಣಿಯ ನಿವಾಸಿ ನಿವೃತ್ತ ಯೋಧ.ಭೋವಿ ಸಮಾಜದ ಹಿರಿಯರಾದ ಹನಮಂತಪ್ಪ ಹುಚ್ಚಪ್ಪ ಭೋವಿ( 82) ಭಾನುವಾರ ನಿಧನರಾದರು.ಮೃತರು ಪತ್ನಿ.4 ಜನ ಪುತ್ರರು.ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.ಹಿರಿಯ ಪತ್ರಕರ್ತ ಹುಚ್ಚಪ್ಪ ಭೋವಿ ಮೃತರ ಪುತ್ರರಲ್ಲಿ ಒಬ್ಬರು.
ಸಂತಾಪ ಸೂಚನೆ
ಪಂಚಗ್ರಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು, ಗವಿ ಮಠದ ಬಸವಲಿಂಗ ಸ್ವಾಮೀಜಿ, ಅಜಾತ ನಾಗಲಿಂಗ ಮಠದ ವೀರಯ್ಯ ಸ್ವಾಮೀಜಿ, ಶಾಸಕ ಎನ್. ಎಚ್. ಕೋನರಡ್ಡಿ, ಮಾಜಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಕೆ. ಎನ್. ಗಡ್ಡಿ, ಕ್ರೀಡಾಪ್ರಾಧಿಕಾರದ ಉಪಾಧ್ಯಕ್ಷರಾದ ವಿನೋದ ಅಸೂಟಿ, ಕೆಪಿಸಿಸಿ ಸದ್ಯಸರಾದ ವಿಜಯ ಕುಲಕರ್ಣಿ ಹಾಗೂ ಮಾಜಿ ಸೈನಿಕರು, ಪತ್ರಕರ್ತರು, ಭೋವಿ ಸಮಾಜ, ರಾಮಲಿಂಗಓಣಿ, ಗುಡ್ಡದಕೇರಿ ಓಣಿಯ ಗುರುಹಿರಿಯರು ಸಂತಾಪ ಸೂಚಿಸಿದ್ದಾರೆ.

