ವಿಜಯಪುರ: ಪಂಚಮಸಾಲಿ ಪೀಠಾಧೀಶರ ಬದಲಾವಣೆ ವಿವಾದ ಮತ್ತೇ ಭುಗಿಲೆದ್ದಿದ್ದು ನೆನ್ನೆ ರಾತ್ರಿ ಪೀಠಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ.
ಬೀಗ ಹಾಕಿರುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದ್ದು, ಯಾರು ಬೀಗ ಹಾಕಿದ್ದು ಎಂಬುದು ನಿಗೂಢವಾಗಿದೆ. ಪೀಠಾಧ್ಯಕ್ಷರ ಬದಲಾವಣೆ ವಿವಾದ ಮತ್ತೆ ಭುಗಿಲೆದ್ದ ವಿವಾದದ ಹಿನ್ನೆಲೆಯಲ್ಲಿ ಬೀಗ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.
ಕೂಡಲ ಸಂಗಮದ ಪಂಚಮಸಾಲಿ ಪೀಠದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

