ಸುದ್ದಿ

ರಾಜ್ಯ ಬಿಜೆಪಿ ವಿರುದ್ಧ ಲಿಂಬಾವಳಿ ಅಸಮಾಧಾನ

Share It

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಮಾಜಿ ಸಚಿವ, ಹಿರಿಯ ಮುಖಂಡ ಅರವಿಂದ ಲಿಂಬಾವಳಿ ಅವರು ಪ್ರತಿಪಕ್ಷವಾಗಿ ಬಿಜೆಪಿ ವಿಧಾನಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ದನಿಯೆತ್ತಿ ಹೋರಾಡಲು ವಿಫಲವಾಗಿದೆ.

ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮಧ್ಯೆ ತಾಳಮೇಳವೇ ಇಲ್ಲ.ಇನ್ನು ಪಕ್ಷ ಹೇಗೆ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಆತಂಕ ತಂದಿದೆ.

ರಾಜ್ಯದ ಸಾಕಷ್ಟು ಕಡೆ ಈ ಬಾರಿ ಮುಂಗಾರು ಮಳೆ ಅತಿಯಾಗಿ ಸುರಿದು ಜನರು ನೆರಹಾವಳಿಯಿಂದ ಸಂತ್ರಸ್ತರಾಗಿದ್ದಾರೆ. ಈ ಬಗ್ಗೆ ಬೆಳಕು ಚೆಲ್ಲಿ ನೆರೆಸಂತ್ರಸ್ತರಿಗೆ ಸರ್ಕಾರದಿಂದ ನೆರವು ಕೊಡಿಸಲು ಪ್ರಯತ್ನವೇ ಆಗುತ್ತಿಲ್ಲ ಎಂದು ಲಿಂಬಾವಳಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Share It

You cannot copy content of this page