ಬೆಳಗಾವಿ ಬಳಿ ನದಿಗೆ ಬಿದ್ದ ಬೈಕ್: ಯುವಕ ನಾಪತ್ತೆ, ಇನ್ನೊಬ್ಬ ಪಾರು

Share It

ಬೆಳಗಾವಿ: ಬಿ.ಕೆ. ಕಂಗ್ರಾಳಿಯಲ್ಲಿ ಶನಿವಾರ ರಾತ್ರಿ ಬೈಕ್ ಮಾರ್ಕಂಡೇಯ ನದಿಗೆ ಬಿದ್ದು, ಒಬ್ಬ ಸವಾರ ನೀರುಪಾಲಾಗಿದ್ದು, ಇನ್ನೊಬ್ಬ ಈಜಿ ದಡ ಸೇರಿದ್ದಾರೆ.

ಅಲತಗಾ ಗ್ರಾಮದ ಓಂಕಾರ ಅರುಣ ಪಾಟೀಲ (23) ನೀರಿನಲ್ಲಿ ಕೊಚ್ಚಿಕೊಂಡು ಹೋದವ. ಇವರ ಸಹೋದರ ಜ್ಯೋತಿನಾಥ ಪಾಟೀಲ ಈಜಿ ದಡ ಸೇರಿದ್ದಾರೆ.

ಇಬ್ಬರೂ ಸಹೋದರರು ಅಲತಗಾದಿಂದ ಕಂಗ್ರಾಳಿಗೆ ಕ್ಷೌರ ಮಾಡಿಸಿಕೊಳ್ಳಲು ಹೊರಟಿದ್ದರು. ನದಿ ಹರಿಯುವ ಜಾಗದಲ್ಲಿ ಬೈಕ್ ನಿಯಂತ್ರಣ ತಪ್ಪಿ ಮಾರ್ಕಂಡೇಯ ನದಿಗೆ ಬಿದ್ದಿದೆ. ಮಾಹಿತಿ ತಿಳಿಯುತ್ತಿದ್ದಂತಯೇ ಸ್ಥಳಕ್ಕಾಗಮಿಸಿದ ಕಾಕತಿ ಠಾಣೆ ಪೊಲೀಸರು ಓಂಕಾರ ಪಾಟೀಲಗಾಗಿ ಶೋಧ ಕಾರ್ಯ ಶುರು ಮಾಡಿದರು. ಡಿಸಿಪಿ ಪಿ.ವಿ.ಸ್ನೇಹಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎನ್.ಡಿ.ಆರ್.ಎಫ್ ತಂಡ ಕರೆಸಲಾಗಿದ್ದು ಶೋಧ ಕಾರ್ಯ ರಾತ್ರಿಯೂ ನಡೆದಿದೆ.


Share It

You May Have Missed

You cannot copy content of this page