ಉಪಯುಕ್ತ ಸುದ್ದಿ

ಇ-ಖಾತಾ ಪಡೆದು ಸಂತಸಪಟ್ಟ ಬಿಟಿಎಂ ಲೇಔಟ್ ಜನತೆ: ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಇ-ಖಾತಾ ಅಭಿಯಾನ

Share It

ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ನಿರಂತರ ಇ-ಖಾತಾ ಅಭಿಯಾನ

ಬೆಂಗಳೂರು: ಇ-ಖಾತಾ ಪಡೆಯುವುದು ಸಂಕಷ್ಟ ಎಂಬ ಸ್ಥಿತಿಗೆ ತಲುಪಿದ್ದ ನಗರದ ಜನತೆಯೀಗ ಸರಾಗವಾಗಿ ಇ-ಖಾತಾ ಪಡೆಯುವ ವ್ಯವಸ್ಥೆ ನಿರ್ಮಾಣವಾಗಿದ್ದು, ಬಿಟಿಎಂ ಲೇಔಟ್ ಶಾಸಕರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಕಚೇರಿಯಲ್ಲಿ ಇ-ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಈ ಹಿಂದೆ ಜುಲೈ 26ರವರೆಗೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸಾರ್ವಜನಿಕರಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಇದೀಗ ನಿರಂತರವಾಗಿ ಇ-ಖಾತಾ ಅಭಿಯಾನ ನಡೆಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ.

ಅಭಿಯಾನ ಜು 14 ರಿಂದ ಆರಂಭವಾಗಿದ್ದು, ಈವರೆಗೆ ಸಾವಿರಾರು ಮಾಲೀಕರು ಇ-ಖಾತಾವನ್ನು ಉಚಿತವಾಗಿ ಯಾವುದೇ ಅಡೆತಡೆಯಿಲ್ಲದೆ ಪಡೆದುಕೊಂಡಿದ್ದಾರೆ. ಖುದ್ದು ಸಚಿವ ರಾಮಲಿಂಗಾ ರೆಡ್ಡಿ ಅವರು ಕೆಲವು ಫಲಾನುಭವಿಗಳಿಗೆ ಇ-ಖಾತಾ ದೃಢೀಕರಣ ಪತ್ರಗಳನ್ನು ನೀಡುತ್ತಿದ್ದು, ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಕಂದಾಯ ಅಧಿಕಾರಿಗಳು ಹಾಗೂ ಶಾಸಕರ ಕಚೇರಿಯ ಸಿಬ್ಬಂದಿ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಾಜರಿದ್ದು, ಸಾರ್ವಜನಿಕರ ನೆರವಿಗೆ ನಿಂತು ಇ-ಖಾತಾ ಮಾಡಿಸಿಕೊಡುತ್ತಿದ್ದಾರೆ. ಸೂಕ್ತ ದಾಖಲಾತಿಗಳೊಂದಿಗೆ ಆಗಮಿಸುವ ಆಸ್ತಿ ಮಾಲೀಕರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಜತೆಗೆ ಅವರ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಖಾತಾ ಮಾಡಿಕೊಡಲಾಗುತ್ತಿದೆ.

ಜುಲೈ 26ರವರೆಗೆ ಇ-ಖಾತಾ ಅಭಿಯಾನ ನಡೆಯಲಿದ್ದು, ಆಸ್ತಿ ಮಾಲೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಇ-ಖಾತಾ ಪಡೆದುಕೊಳ್ಳಬಹುದು. ಖಾತೆದಾರರು ಅಗತ್ಯ ದಾಖಲೆಗಳಾದ ಸೇಲ್ ಡೀಡ್ ಪ್ರತಿ, ಖಾತಾ ಪ್ರತಿ, ಇತ್ತೀಚಿನ ವಿದ್ಯುತ್ ಬಿಲ್, ಇತ್ತೀಚಿನ ಬಿಬಿಎಂಪಿ ಟ್ಯಾಕ್ಸ್ ರಸೀದಿ, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ GPS ಲೋಕೇಷನ್ ಸಹಿತ ಕಟ್ಟಡದ ಭಾವಚಿತ್ರವನ್ನು ಜತೆಯಲ್ಲಿ ತರಬೇಕು.


Share It

You cannot copy content of this page