ಚಿತ್ರದುರ್ಗ:ಮದುವೆ ಮಾಡಲಿಲ್ಲ ಎಂದು ಅಪ್ಪನನ್ನೇ ಕೊಂದ ಮಗ

Share It

ಚಿತ್ರದುರ್ಗ: ಮದುವೆ ಮಾಡಲಿಲ್ಲ ಎಂದು ತಂದೆಯೊಂದಿಗೆ ಜಗಳ ತೆಗೆದಿದ್ದ ಮಗ, ಮಲಗಿದ್ದಾಗ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮದ ನಿಂಗಪ್ಪ(65) ಕೊಲೆಯಾದ ದುರ್ದೈವಿ. ಆತನ ಪುತ್ರ ನಿಂಗರಾಜು ಕೊಲೆ ಮಾಡಿದ ಆರೋಪಿ. ಪ್ರಕರಣ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆ ಪೊಲೀಸರು ಮಗನನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.

ತಮಗೆ ಮದುವೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ನಿಂಗರಾಜು ತಂದೆಯೊಂದಿಗೆ ಜಗಳ ತೆಗೆದಿದ. ಜಗಳದ ನಂತರ ನಿಂಗಪ್ಪ ಮಲಗಿದ್ದ ಸಂದರ್ಭದಲ್ಲಿ ನಿಂಗರಾಜು, ರಾಡಿನಿಂದ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.


Share It
Previous post

ಹತ್ತು ಹೆಣ್ಣಿನ ನಂತರ ಒಂದು ಮುತ್ತೆತ್ತ ಮಡದಿ : ಮಕ್ಕಳ ಹೆಸರನ್ನೇ ಒಮ್ಮೆಮ್ಮೆ ಮರೆಯುವ ಅಪ್ಪ !

Next post

ಬಳ್ಳಾರಿಯಲ್ಲಿ ಡಿಸಿಎಂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು ಯಾಕೆ?: ರಾಜ್ಯದಲ್ಲಿ.ಇರೋದು ಹೆಬ್ಬೆಟ್ಟು ಗೃಹ ಸಚಿವರಾ?: HDK ಪ್ರಶ್ನೆ

You May Have Missed

You cannot copy content of this page