ಏನಿದೆ ಬೆಂಗಳೂರು ಬೆಳೆದು ಬಂದ ಇತಿಹಾಸ?
ಕೆಂಪೇಗೌಡರು ಕಟ್ಟಿದ ನಗರದ ದಕ್ಕೆಯಾಗುತ್ತಾ?
ಬೆಂಗಳೂರು: ಬೆಂಗಳೂರು ಅಂದ್ರೆನೆ ಬೆಳವಣಿಗೆ, 15 ನೇ ಶತಮಾನದಲ್ಲಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ನಗರ ತನ್ನ ಸೊಬಗಿನಿಂದಲೇ ವಿಶ್ವದ ಗಮನ ಗೆದ್ದಿದೆ. ಅಂದಿನಿಂದ ಇಂದಿನವರೆಗೆ ಅನೇಕ ಬದಲಾವಣೆಗಳೊಂದಿಗೆ ಚಲನೆಯಲ್ಲಿದೆ.
ನಾಡಪ್ರಭುಗಳ ಆಡಳಿತದ ನಂತರ ಹೈದರಾಲಿ, ಟಿಪ್ಪು ಸುಲ್ತಾನ್, ಬ್ರಿಟೀಷ್ ಆಳ್ವಿಕೆಯ ಅವಧಿಯಲ್ಲಿ ಬೆಂಗಳೂರು ರಾಜಧಾನಿಯಾಗಿ, ಆಡಳಿತ ಕೇಂದ್ರವಾಗಿ, ನಗರವಾಗಿ ನಡೆದುಬಂದಿದೆ. ಟಿಪ್ಪುವಿನ ಬೇಸಿಗೆ ಅರಮನೆ, ಮೈಸೂರು ಸಂಸ್ಥಾನದ ಅರಮನೆ, ಬ್ರಿಟೀಷ್ ಆಡಳಿತದ ಕೇಂದ್ರ ಸ್ಥಾನ ಹೀಗೆ ಬೆಂಗಳೂರಿನದ್ದು ವಿವಿಧ ಪಾತ್ರ.
ಆದರೆ, ಬೆಂಗಳೂರು ಒಂದು ಆಡಳಿತಾತ್ಮಕ ಸಂಸ್ಥೆಯಾಗಿದ್ದು 1850 ರ ಪಟ್ಟಣಗಳ ಸುಧಾರಣಾ ಕಾಯ್ದೆಯಡಿ ನಗರದ ಸ್ಥಳೀಯಾಡಳಿತ ರೂಪುಗೊಂಡಿತ್ತು. ಅದೇ ರೀತಿ ಕಂಟೋನ್ಮೆಂಟ್ ಪ್ರದೇಶಕ್ಕಾಗಿ ಮತ್ತೊಂದು ಆಡಳಿತ ಸಂಸ್ಥೆಯನ್ನು ರೂಪಿಸಿ, ಎರಡು ಮಂಡಳಿಗಳನ್ನು ಸ್ಥಳೀಯ ಸಂಸ್ಥೆಗಳ ಕಾನೂನಿನಡಿ ತರಲಾಯಿತು.
1981 ರಲ್ಲಿ ಬೆಂಗಳೂರು ನಗರ ಪುರಸಭೆ ಮತ್ತು ಕಂಟೋನ್ಮೆಂಟ್ ಎಂಬ ಎರಡು ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು. ನಂತರದ ವರ್ಷದಲ್ಲಿ ಅರ್ಧದಷ್ಟು ಪ್ರತಿನಿಧಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲು ತೀರ್ಮಾನಿಸಲಾಯಿತು. ಅಂದಿನಿಂದಲೇ ಆಸ್ತಿ ತೆರಿಗೆ, ಪೊಲೀಸ್ ವ್ಯವಸ್ಥೆ ಮತ್ತು ಸ್ಥಳೀಯ ಆಡಳಿತದ ಅಧಿಕಾರ ನೀಡಲಾಯಿತು.
1913 ರಲ್ಲಿ ಮೇಯರ್ ನೇಮಕ ಆರಂಭಗೊಂಡಿತು. 1923 ರಲ್ಲಿ ಪಾಲಿಕೆ ಆಯುಕ್ತರನ್ನು ನೇಮಿಸಲಾಯಿತು. 1949 ರ ನಂತರ ಎರಡು ಸಂಸ್ಥೆಗಳನ್ನು ವಿಲೀನಗೊಳಿಸಿ, ಬೆಂಗಳೂರು ಸಿಟಿ ಕಾರ್ಪೊರೇಷನ್ ಅಸ್ತಿತ್ವಕ್ಕೆ ಬಂತು. 70 ಕಾರ್ಪೋರೇಟರ್ ಗಳು ಮತ್ತು 50 ಆಡಳಿತ ವಿಭಾಗಗಳನ್ನು ಮಾಡಲಾಯಿತು. ಮೊದಲ ಬಾರಿಗೆ 1950 ರಲ್ಲಿ ಚುನಾವಣೆ ನಡೆಯಿತು.
1889 ರಲ್ಲಿ ಬೆಂಗಳೂರು ಸಿಟಿ ಕಾರ್ಪೊರೇಷನ್(BCCl ಬೆಂಗಳೂರು ಮಹಾನಗರ ಪಾಲಿಕೆ ಎಂದು ಮರುನಾಮಕರ ಪಡೆಯಿತು. 87 ವಾರ್ಡ್ ಗಳಿದ್ದವು. ನಂತರ 1995 ರಲ್ಲಿ ವಾರ್ಡ್ ಗಳ ಸಂಖ್ಯೆಯನ್ನು100 ಕ್ಕೆ ಏರಿಸಲಾಯಿತು. ಜತೆಗೆ ನಗರ ವ್ಯಾಪ್ತಿಯನ್ನು ಪ್ರತಿನಿಧಿಸುವ ಶಾಸಕರು, ವಿಧಾನಪರಿಷತ್ ಸದಸ್ಯರು, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಿಗೆ ಮತದಾನದ ಹಕ್ಕು ನೀಡಲಾಯಿತು.
2007 ರಲ್ಲಿ ಏಳು ಮಿನಿಸಿಪಲ್ ಕಾರ್ಪೊರೇಷನ್ ಹಾಗೂ 110 ಹಳ್ಳಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡ BMP ಮುಂದೆ BBMP( ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಆಯಿತು. ಎಲ್ಲ ಪ್ರಕ್ರಿಯೆಗಳ ನಂತರ 2010 ರಲ್ಲಿ ಮೊದಲ198 ವಾರ್ಡ್ ಗಳ ಬಿಬಿಎಂಪಿ ಕೌನ್ಸಿಲ್ ಅಸ್ತಿತ್ವಕ್ಕೆ ಬಂತು. 2015 ರ ಆಗಸ್ಟ್ 22 ರಂದು ಎರಡನೇ ಕೌನ್ಸಿಲ್ ಅಸ್ತಿತ್ವಕ್ಕೆ ಬಂದು, ಐದು ವರ್ಷಗಳ ಕಾಲ ಆಡಳಿತ ನಡೆಯಿತು.
2020 ರಲ್ಲಿ ಈ ಕೌನ್ಸಿಲ್ ಅವಧಿ ಮುಕ್ತಾಯವಾದ ನಂತರ, ಅಧಿಕಾರದಲ್ಲಿದ್ದ ಬಿಜೆಪಿ ಬಿಬಿಎಂಪಿ ಕಾಯ್ದೆ ಮೂಲಕ ವಾರ್ಡ್ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯ ಕೈಗೆತ್ತಿಕೊಂಡಿತು. ನ್ಯಾಯಾಲಯದ ಮೆಟ್ಟಿಲೇರಿ, ಅಂತಿಮವಾಗಿ 243 ವಾರ್ಡ್ ಗಳಿಗೆ ಅಂತಿಮಗೊಳಿಸಿದ ಬಿಬಿಎಂಪಿ ಕಾಯ್ದೆಯನ್ನು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ತಂದಿತು. ಆದರೆ, ಮೂರು ವರ್ಷಗಳ ಚುನಾವಣೆ ನಡೆಯಲಿಲ್ಲ. ಮತ್ತೇ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇದೀಗ ಗ್ರೇಟರ್ ಬೆಂಗಳೂರು ಕಾಯ್ದೆಯನ್ನು ಜಾರಿಗೊಳಿಸಿದೆ.
ಇದೀಗ ಗ್ರೇಟರ್ ಬೆಂಗಳೂರು ಕಾಯ್ದೆಯಲ್ಲಿನ ಅಂಶಗಳ ಆಧಾರದಲ್ಲಿ ಬೆಂಗಳೂರು ಆಡಳಿತ ನಡೆಯಲಿದೆ. ಮೇ. 15 ರಿಂದ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದ್ದು, ಜನಪ್ರತಿನಿಧಿಗಳಿಲ್ಲದೆ ದೀರ್ಘಕಾಲವಾಗಿದೆ. ಗ್ರೇಟರ್ ಬೆಂಗಳೂರು ಜಾರಿ ನಂತರ ಚುನಾವಣೆ ನಡೆಸಿ, ಜನಪ್ರತಿನಿಧಿಗಳ ಆಯ್ಕೆ ನಡೆಯಲಿದೆ. ಆದರೆ, ಅದ್ಯಾವಾಗ ಎಂಬ ಕುತೂಹಲ ರಾಜಧಾನಿಯ ಜನರಿಗಿದೆ.