ಬೆಂಗಳೂರು: ಅನ್ನಭಾಗ್ಯ ಫಲಾನುಭವಿಗಳಿಗೆ ಸರಕಾರ ಮತ್ತೊಂದು ಗುಡ್ ನ್ಯೂಸ್ ಕೊಡಲು ತೀರ್ಮಾನಿಸಿದ್ದು, ಅಕ್ಕಿಯ ಜತೆಗೆ ಆಹಾರ ಕಿಟ್ ವಿತರಣೆ ಮಾಡಲು ತೀರ್ಮಾನ ಕೈಗೊಳ್ಳಲಿದೆ.
ಈ ಸಂಬAಧ ಕ್ಯಾಬಿನೆಟ್ ನಿರ್ಣಯಕ್ಕಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ನಂದಿಬೆಟ್ಟದಲ್ಲಿ ನಡೆಯಲಿರುವ ಕ್ಯಾಬಿನೆಟ್ನಲ್ಲಿ ಇದಕ್ಕೆ ಅನುಮೋದನೆ ಸಿಗಲಿದೆ. ಅನುಮೋದನೆಯ ನಂತರ ಸರಕಾರ ೫ ಕೆ.ಜಿ. ಅಕ್ಕಿಯ ಬದಲಿಗೆ ಆಹಾರದ ಕಿಟ್ ವಿತರಣೆ ಮಾಡಲು ತೀರ್ಮಾನಿಸಿದೆ.
ರಾಜ್ಯ ಸರಕಾರ ಹೆಚ್ಚುವರಿಯಾಗಿ ಕೊಡುತ್ತಿರುವ ಐದು ಅಕ್ಕಿ ಜತೆಗೆ ಆಹಾರದ ಕಿಟ್ ನೀಡಲಾಗುತ್ತದೆ. ಮತ್ತೆöÊದು ಕೆ.ಜೆ. ಅಕ್ಕಿ ಎಂದಿನAತೆ ಫಲಾನುಭವಿಗಳಿಗೆ ಸಿಗಲಿದೆ. ೫ ಕೆಜೆ ಅಕ್ಕಿಯ ಬದಲಿಗೆ ಸಕ್ಕರೆ, ಉಪ್ಪು, ತೊಗರಿಬೇಳೆ, ಟೀ, ಕಾಫಿ, ಅಡುಗೆ ಎಣ್ಣೆಯನ್ನೊಳಗೊಂಡ ಒಂದು ಪ್ಯಾಕೇಟ್ ನೀಡಲು ಇಲಾಖೆ ತೀರ್ಮಾನಿಸಿದೆ.