ಬೆಂಗಳೂರು: ಕೊಲ್ಲಿ ಯುದ್ಧ ತೀವ್ರಗೊಂಡ ಹಿನ್ನೆಲೆಯಲ್ಲಿ ಕೆಂಪೇಗೌಡ ನಿಲ್ದಾಣದಿಂದ ದುಬೈ ಸೇರಿದಂತೆ ವಿವಿಧ ನಗರಗಳಿಗೆ ತೆರಳಬೇಕಿದ್ದ 17 ವಿಮಾನಗಳು ರದ್ದಾಗಿವೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಎಂಟು ಮತ್ತು ಇಲ್ಲಿಂದ ನಿರ್ಗಮನಿಸಬೇಕಿದ್ದ 9 ವಿಮಾನಗಳು ರದ್ದಾಗಿವೆ. ದುಬೈ, ಕುವೈತ್ ಮೊದಲಾದ ನಗರಳಿಗೆ ಈ ವಿಮಾನಗಳು ಸಂಪರ್ಕಿಸಬೇಕಾಗಿತ್ತು.

