ಉಪಯುಕ್ತ ಸುದ್ದಿ

15 ದಿನಗಳಲ್ಲಿಯೇ ಜಾತಿಗಣತಿ ಪೂರ್ಣಗೊಳಿಸಲು ತಾಕೀತು: ಸರಕಾರದಿಂದ ಮಹತ್ವದ ನಿರ್ಧಾರ

Share It

ಬೆಂಗಳೂರು: ಜಾತಿಗಣತಿಯ ಮರು ಸಮೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರಕಾರ 15 ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದೆ.

ಸೆ.22ರಿಂದ ಜಾತಿಗಣತಿಯ ಸಮೀಕ್ಷೆ ಆರಂಭಿಸಿ, ಅಕ್ಟೋಬರ್ ಕೊನೆಯ ವಾರದಲ್ಲಿ ವರದಿ ಸಲ್ಲಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಹಿಂದುಳಿದ ವರ್ಗಗಳ ಆಯೋಗದ ಮೂಲಕ ರಚನೆಯಾಗಿರುವ ಜಾತಿ ಸಮೀಕ್ಷೆಗಾಗಿ ನೇಮಿಸಿರುವ ಸಮಿತಿಗೆ ತಿಳಿಸಲಾಗಿದೆ.

ಜಾತಿಗಣತಿಯಲ್ಲಿ ಕಳೆದ ಸಲ ಕೆಲ ಲೋಪಗಳಾಗಿವೆ ಎಂಬ ಕಾರಣಕ್ಕೆ ಹಿಂಪಡೆಯಲಾಗಿದೆ. ಕೆಲವು ಸಮುದಾಯಗಳಿಂದ ಇದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಹೀಗಾಗಿ, ಯಾವುದೇ ಕಾರಣಕ್ಕೂ ಈ ಸಲ ಲೋಪಗಳಾಗದಂತೆ ಕ್ರಮ ವಹಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.


Share It

You cannot copy content of this page