ರಾಜಕೀಯ ಸುದ್ದಿ

ಉತ್ತರಾಖಾಂಡ್‌ನಲ್ಲಿ ಕನ್ನಡಿಗರು: ಇನ್ನೂ 4 ಮೃತದೇಹಗಳು ಪತ್ತೆ

Share It

ಡೆಹ್ರಾಡೂನ್‌:

ಈ ಕೆಳಗಿನ ಚಾರಣಿಗರನ್ನು ನಿನ್ನೆ (ಬುಧವಾರ) ರಕ್ಷಿಸಿ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ.

  1. ಸೌಮ್ಯಾ ಕೆನಾಲೆ
  2. ಸ್ಮೃತಿ ಡೋಲಾಸ್
  3. ಶೀನಾ ಲಕ್ಷ್ಮಿ
  4. ಎಸ್. ಶಿವ ಜ್ಯೋತಿ
  5. ಅನಿಲ್ ಜಮತಿಗೆ ಅರುಣಾಚಲ ಭಟ್
  6. ಭರತ್ ಬೊಮ್ಮನ ಗೌಡರ್
  7. ಮಧು ಕಿರಣ್ ರೆಡ್ಡಿ
  8. ಜೈಪ್ರಕಾಶ್ ಬಿ.ಎಸ್.

ಇಂದು (ಗುರುವಾರ) ಬೆಳಗ್ಗೆ 5 ಚಾರಣಿಗರನ್ನು ರಕ್ಷಿಸಲಾಗಿದ್ದು, ಬೆಳಗ್ಗೆ 11 ಗಂಟೆಗೆ ವಿಮಾನದ ಮೂಲಕ ರಕ್ಷಿಸಲ್ಪಟ್ಟವರನ್ನು ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ಕಳುಹಿಸಲು ಸಿದ್ದತೆ ನಡೆಸಲಾಗಿದೆ.

  1. ಎಸ್ ಸುಧಾಕರ್
  2. ವಿನಯ್ ಎಂ.ಕೆ
  3. ವಿವೇಕ್ ಶ್ರೀಧರ್
  4. ನವೀನ್ ಎ
  5. ರಿತಿಕಾ ಜಿಂದಾಲ್

5 ಚಾರಣಿಗರ ಮೃತದೇಹಗಳನ್ನು ನಿನ್ನೆ (ಬುಧವಾರ) ಉತ್ತರಕಾಶಿಗೆ ವಿಮಾನದಲ್ಲಿ ರವಾನಿಸಲಾಗಿದೆ-

  1. ಸಿಂಧು ವಕೆಲಂ
  2. ಆಶಾ ಸುಧಾಕರ್
  3. ಸುಜಾತಾ ಮುಂಗುರವಾಡಿ
  4. ವಿನಾಯಕ್‌ ಮುಂಗುರವಾಡಿ
  5. ಚಿತ್ರಾ ಪ್ರಣೀತ್

ಇಂದು ಮುಂಜಾನೆ ಕಾರ್ಯಾಚರಣೆಯಲ್ಲಿ ಇನ್ನೂ 4 ಶವಗಳನ್ನು ಪತ್ತೆ ಮಾಡಲಾಗಿದ್ದು, ಉತ್ತರಕಾಶಿಗೆ ವಿಮಾನದಲ್ಲಿ ರವಾನಿಸಲಾಗಿದೆ.

  1. ಪದ್ಮನಾಭ ಕೆ.ಪಿ
  2. ವೆಂಕಟೇಶ್ ಪ್ರಸಾದ್ ಕೆ
  3. ಅನಿತಾ ರಂಗಪ್ಪ
  4. ಪದ್ಮಿನಿ ಹೆಗ್ಡೆ

ಉತ್ತರಕಾಶಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಗೆ ಎಲ್ಲಾ 9 ಮೃತದೇಹಗಳನ್ನು ವಿಮಾನದ ಮೂಲಕ ಡೆಹ್ರಾಡೂನ್‌ಗೆ ತರಲಾಗುವುದು. ಡೆಹ್ರಾಡೂನ್‌ನಲ್ಲಿ ಎಂಬಾಮಿಂಗ್ ಮಾಡಲಾಗುತ್ತದೆ.

ಎಲ್ಲಾ 9 ಶವಗಳನ್ನು ಬೆಂಗಳೂರಿಗೆ ಸಾಗಿಸಲು ನಾವು ಈಗಾಗಲೇ ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡಿದ್ದೇವೆ. ನಾನೀಗ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿಯವರ ಭೇಟಿಗೆ ಹೊರಟಿದ್ದೇನೆ. ಮುಖ್ಯ ಕಾರ್ಯದರ್ಶಿಯವರೊಂದಿಗಿನ ಸಭೆಯ ನಂತರ ಮೃತದೇಹಗಳ ಸಾಗಣೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ನಾನು ಭಾವಿಸುತ್ತೇನೆ.

  • ಕೃಷ್ಣ ಬೈರೇಗೌಡ

Share It

You cannot copy content of this page