ಅಪರಾಧ ಸುದ್ದಿ

ಕರಗ ಹಗರಣ: 2 ಲಕ್ಷ ಕಮೀಷನ್‌ಗೆ ಬೇಡಿಕೆಯಿಟ್ಟಿದ್ದ ಅಧಿಕಾರಿ ಅಮಾನತು

Share It

ಬೆಂಗಳೂರು: ಕರಗ ಉತ್ಸವದ ಬಿಲ್‌ಗಳನ್ನು ಬಾಕಿಯಿಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ಇಒ ನಾಗರಾಜ್ ಅವರನ್ನು ಅಮಾನತು ಮಾಡಲಾಗಿದೆ.

ಬಾಕಿ ಬಿಲ್ ಗಳನ್ನು ಪಾವತಿ ಮಾಡಲು 2 ಲಕ್ಷ ರು.ಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು. ಹೀಗಾಗಿ, ಲೈಟಿಂಗ್ಸ್, ಹೂವಿನ ವ್ಯಾಪಾರಿಗಳ ಬಿಲ್ ಇನ್ನೂ ಬಿಡುಗೆಯಾಗಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಮುಜರಾಯಿ ಇಲಾಖೆ ಆಯುಕ್ತ ಆಯುಕ್ತ ಶರತ್ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಆಯುಕ್ತರು ಮಾಹಿತಿ ನೀಡಿದ್ದು, ದೇಗುಲದಲ್ಲಿ ನಡೆದಿರುವ ಅವ್ಯವಹಾರ ಮತ್ತು ಲಂಚಕ್ಕೆ ಬೇಡಿಕೆ ಸಂಬಂಧ ಅವರನ್ನು ಅಮಾನತು ಮಾಡಿದ್ದು, ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಬಿಲ್ ಪಾವತಿ ಬಾಕಿಯಿದ್ದರೆ, ಅದನ್ನು ಪರಿಶೀಲಿಸಿ ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


Share It

You cannot copy content of this page