ರಾಜಕೀಯ ಸುದ್ದಿ

ಸಿಎಂ ಬದಲಾಯಿಸಿದರೆ ಲಿಂಗಾಯತರಿಗೆ ಸಿಎಂ ಸೀಟು ಕೊಡಲಿ: ಶ್ರೀಶೈಲ ಜಗದ್ಗುರುಗಳ ಒತ್ತಾಯ

Share It

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದಾದರೆ ವೀರಶೈವ-ಲಿಂಗಾಯತ ಧರ್ಮಕ್ಕೆ ಆದ್ಯತೆ ಕೊಡಿ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಆಗ್ರಹಿಸಿದ್ದಾರೆ.

ಇಂದು ಚಿಕ್ಕೋಡಿ ಜಿಲ್ಲೆಯ ಯಡೂರು ಗ್ರಾಮದ ಮಾತನಾಡಿದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು “ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದಾದರೆ ಮೊದಲು ಲಿಂಗಾಯತ ಧರ್ಮದ ಪಂಚಪೀಠಕ್ಕೆ ಆದ್ಯತೆ ‌ಕೊಡಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸ್ಥಾನವನ್ನು ವೀರಶೈವ ಕಾಂಗ್ರೆಸ್ ನಾಯಕರೊಬ್ಬರಿಗೆ ಕೊಡಿ ಎಂದು ಒತ್ತಾಯಿಸಿದರು.


Share It

You cannot copy content of this page