ಉಪಯುಕ್ತ ಸುದ್ದಿ

ನಿಗದಿಗಿಂತ ಮೊದಲೇ ಮುಂಗಾರು ಮಳೆ;ಮೇ ಕೊನೆಯಲ್ಲಿಯೇ ಮಾನ್ಸೂನ್ ಮಾರುತ ಪ್ರವೇಶ

Share It

ಬೆಂಗಳೂರು: ಈ ವರ್ಷದ ಮುಂಗಾರು ಮಳೆ ಮೇ ಅಂತ್ಯದಲ್ಲಿಯೇ ಆರಂಭವಾಗಲಿದ್ದು, ಜೂನ್ ನಲ್ಲಿ ಕರ್ನಾಟಕ ಪ್ರವೇಶಿಸುತ್ತಿದ್ದ ಮಾನ್ಸೂನ್ ಮಾರುತಗಳು ನಾಲ್ಕು ದಿನ ಮೊದಲೇ ರಾಜ್ಯಕ್ಕೆ ಪ್ರವೇಶಿಸಲಿವೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮೇ.27 ರಂದು ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಲಿವೆ. ಸಾಮಾನ್ಯವಾಗಿ ಕೇರಳದಿಂದ ಕರ್ನಾಟಕ ಪ್ರವೇಶಕ್ಕೆ ನಾಲ್ಕು ದಿನಗಳನ್ನು ತೆಗೆದುಕೊಳ್ಳಲಿವೆ. ಆದರೆ, ಈ ವರ್ಷ ಬೇಗನೆ ಅಂದರೆ, ಮೇ ಅಂತ್ಯದಲ್ಲಿಯೇ ಕರ್ನಾಟಕ ಪ್ರವೇಶದ ಸಾಧ್ಯತೆಗಳಿವೆ ಎನ್ನಲಾಗಿದೆ.

ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಶೇಮ 20 ರಷ್ಟು ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಒಟ್ಟಾರೆ ಮುಂಗಾರಿನಲ್ಲಿ ಭಾರತದಲ್ಲಿ ಶೇ. 104 ರಷ್ಟು ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.


Share It

You cannot copy content of this page