ಬೆಂಗಳೂರು: ಎಸ್ಸಿ, ಎಸ್ಟಿ ಸಮುದಾಯಗಳ ಭೂಮಿ ಮಾರಾಟಕ್ಕೆ ಸರಕಾರ ಮತ್ತಷ್ಟು ಬಿಗಿ ನಿಯಮಗಳನ್ನು ಜಾರಿಗೆ ತಂದಿದ್ದು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) (ತಿದ್ದುಪಡಿ) ನಿಯಮ ೨೦೨೪ ಜಾರಿ ಸಂಬAಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಎಸ್ಸಿ, ಎಸ್ಟಿ ಸಮುದಾಯದವರ ಭೂಮಿಯನ್ನು ಪರಭಾರೆ ಮಾಡಲು ಇರುವ ಕಾಯ್ದೆಯಲ್ಲಿನ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಕಾಯ್ದೆಯು, ಭೂಮಿ ಮಾರಾಟದ ಮುನ್ನ ಹಲವು ಪರಿಶೀಲನಾ ಪ್ರಕ್ರಿಯೆಯನ್ನು ಬಿಗಿಗೊಳಿಸುವ ನಿಯಮವನ್ನು ತಿದ್ದುಪಡಿ ಮೂಲಕ ಜಾರಿಗೆ ತರಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮಂಜೂರು ಮಾಡಿದ ಜಮೀನನ್ನು ಮಾರಾಟ ಅಥವಾ ವರ್ಗಾವಣೆ ಮಾಡಲು ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಿದ ಬಳಿಕ ಅನುಮತಿ ನೀಡುವ ನಿಟ್ಟಿನಲ್ಲಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ.
ಏನೇಳುತ್ತೆ ತಿದ್ದುಪಡಿ ನಿಯಮ?
- ಮಂಜೂರಾತಿ ಪಡೆದವನು ಅಥವಾ ಆತನ ವಾರಸುದಾರ ಭೂಮಿ ವರ್ಗಾವಣೆಗೆ ಪೂರ್ವಾನುಮತಿ ಕೋರಲು ನಮೂನೆ ೩ರಲ್ಲಿ ಸಂಬAಧಪಟ್ಟ ತಾಲೂಕಿನ ತಹಶೀಲ್ದಾರನಿಗೆ ಖುದ್ದಾಗಿ ಅರ್ಜಿ ಸಲ್ಲಿಸಬೇಕು.
- ತಹಶೀಲ್ದಾರ್ ಸೂಕ್ತ ವಿಚಾರಣೆ ಬಳಿಕ ಸಲ್ಲಿಸಲಾದ ದಾಖಲೆಗಳು, ಕಡತಗಳ ಸಂಪೂರ್ಣ ಪರಿಶೀಲನೆ ನಡೆಸಿ, ತನ್ನ ಅಭಿಪ್ರಾಯ ದಾಖಲಿಸಿ ಉಪವಿಭಾಗಾಧಿಕಾರಿಗೆ ಸಲ್ಲಿಸಬೇಕು.
- ಉಪವಿಭಾಗಾಧಿಕಾರಿ ವರದಿಯನ್ನು ಪರ್ಯಾಲೋಚಿಸಿ, ಭೂಮಿಯ ವರ್ಗಾವಣೆಗಾಗಿ ಅನುಮತಿ ನೀಡಬಹುದೇ ಎಂಬ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಶಿಫಾರಸು ಮಾಡಬೇಕು.
- ಉಪವಿಭಾಗಾಧಿಕಾರಿ ಭೂಮಿ ವರ್ಗಾವಣೆಯಲ್ಲಿ ದಬ್ಬಾಳಿಕೆ, ಲೋಪ, ಮೋಸ ಅಥವಾ ಭೂಮಿಯ ತಪ್ಪು ಮೌಲ್ಯನಿರ್ಧರಣೆ ಆಗಿದೆಯೇ ಎಂಬ ಬಗ್ಗೆ ತಿಳಿಯುವ ಸಂಬAಧ ವಿಚಾರಣೆ ನಡೆಸುವ ಅಧಿಕಾರ ಹೊಂದಿರಲಿದ್ದಾರೆ.
- ಲೋಪಗಳು ಕಂಡು ಬಂದರೆ, ಭೂಮಿ ವರ್ಗಾವಣೆ ಅನುಮತಿ ನಿರಾಕರಿಸುವಂತೆ ಶಿಫಾರಸು ಮಾಡಬೇಕು.
- ಜಿಲ್ಲಾಧಿಕಾರಿ ವರದಿ ಸ್ವೀಕರಿಸಿದ ನಂತರ ಮತ್ತು ದಾಖಲಾತಿ ಹಾಗೂ ವರದಿ ಪರಿಶೀಲಿಸಿದ ಬಳಿಕ, ಕಂದಾಯ ಆಯುಕ್ತರಿಗೆ ಭೂಮಿ ವರ್ಗಾವಣೆ ಕುರಿತ ಅನುಮತಿ ಅರ್ಜಿಯನ್ನು ತಮ್ಮ ಶಿಫಾರಸಿನ ಜತೆಗೆ ಸಲ್ಲಿಸಬೇಕು.
- ಕಂದಾಯ ಆಯುಕ್ತರು ವರದಿ ಸ್ವೀಕರಿಸಿದ ನಂತರ, ಪರಿಷ್ಕರಿಸಿ, ಭೂಮಿಯ ವರ್ಗಾವಣೆಗೆ ಸರ್ಕಾರದ ಅನುಮತಿ/ ನಿರ್ಧಾರಕ್ಕಾಗಿ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ (ಕಂದಾಯ) ಅವರಿಗೆ ತಮ್ಮ ಶಿಫಾರಸು ಸಲ್ಲಿಸಬೇಕು.
- ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ (ಕಂದಾಯ) ಅವರು, ತಹಶೀಲ್ದಾರರು ಸಲ್ಲಿಸಿದ ವರದಿ ಹಾಗೂ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಕಂದಾಯ ಆಯುಕ್ತರ ಶಿಫಾರಸ್ಸು ಪರಿಶೀಲಿಸಿ, ಸರ್ಕಾರದ ಅನುಮತಿ/ ಅನುಮೋದನೆ ಪಡೆದ ನಂತರ, ಸರ್ಕಾರದ ಪರವಾಗಿ ಅನುಮತಿ/ ಅನುಮೋದನೆ/ ನಿರ್ಧಾರವನ್ನು ಕಂದಾಯ ಆಯುಕ್ತರಿಗೆ ತಿಳಿಸಬೇಕು.
- ವರ್ಗಾವಣೆಗೆ ಅನುಮೋದನೆ ಪಡೆದ ಮೇಲೆ, ಕಂದಾಯ ಆಯುಕ್ತರು ಭೂಮಿಯ ವರ್ಗಾವಣೆಗಾಗಿ ಅಗತ್ಯ ಅನುಮತಿ ನೀಡಿ ಆದೇಶ ಹೊರಡಿಸಬೇಕು.
- ಕಂದಾಯ ಆಯುಕ್ತರು ಅಗತ್ಯ ಅನುಮತಿ ನೀಡಿದ್ದಲ್ಲಿ, ಉಪವಿಭಾಗಾಧಿಕಾರಿ ಭೂಮಿಯ ವರ್ಗಾವಣೆಗೆ ಅನುವಾಗುವಂತೆ ಸದರಿ ಭೂಮಿಯಿಂದ ಪಿಟಿಸಿಎಲ್ ನಿಶಾನೆಯನ್ನು ತೆಗೆದು ಹಾಕಬೇಕು.
- ಕಂದಾಯ ಆಯುಕ್ತರ ಆದೇಶದಿಂದ ಬಾಧಿತನಾದ ಯಾರೇ ವ್ಯಕ್ತಿ, ಆ ಆದೇಶ ಹೊರಡಿಸಿದ ದಿನಾಂಕದಿAದ ೩೦ ದಿನಗಳ ಅವಧಿಯೊಳಗೆ ಆದೇಶವನ್ನು ಪುನರಾವಲೋಕಿಸುವಂತೆ ಕೋರಿ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ (ಕಂದಾಯ) ಅವರಿಗೆ ಮನವಿ ಸಲ್ಲಿಸಬಹುದು.