ಚಿತ್ರದುರ್ಗ: ನಗರದ ತಮಟುಕಲ್ಲು ರಸ್ತೆಯಲ್ಲಿರುವ ರಾಘವೇಂದ್ರನ ಮನೆಯಲ್ಲಿ ಪೊಲೀಸರು ಸುಮಾರು 2 ಗಂಟೆ ಕಾಲ ಶೋಧ ನಡೆಸಿದ್ದಾರೆ.
ಈ ವೇಳೆ ಪೊಲೀಸರು ರಾಘವೇಂದ್ರನ ಮನೆಯಲ್ಲಿ ಒಂದು ಬೆಳ್ಳಿ ಕಡಗ, ಒಂದು ಚಿನ್ನದ ಸರ, ಒಂದು ಚಿನ್ನದ ಉಂಗುರ ಮತ್ತು 4.5 ಲಕ್ಷ ರೂ. ನಗದು ಹಣ ಸಿಕ್ಕಿದೆ.
ಈ ಎಲ್ಲಾ ಆಭರಣಗಳನ್ನು ಮತ್ತು ಹಣವನ್ನು ರೇಣುಕಾಸ್ವಾಮಿಯಿಂದ ದೋಚಿಕೊಂಡು ಆತನನ್ನು ಕೊಲೆ ಮಾಡಲಾಗಿತ್ತು. ಇದೀಗ ಈ ಎಲ್ಲಾ ಆಭರಣಗಳು, ನಗದು ಹಣವನ್ನು ಚಿತ್ರದುರ್ಗದ ತಮಟುಕಲ್ಲುವಿನಲ್ಲಿರುವ ರಾಘವೇಂದ್ರನ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

