ಬೆಂಗಳೂರು:
ನಟ ದರ್ಶನ್ ಅವರ ಬಂಧನ ಪ್ರಕರಣದಲ್ಲಿ ಸರಕಾರದ ಪರ ವಾದ ಮಂಡಿಸಲು ಸರಕಾರದ ಅಭಿಯೋಜಕರನ್ನಾಗಿ ಪಿ. ಪ್ರಸನ್ನ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.
ನಟಿ ಕಂ ಮಾಡೆಲ್ ಪವಿತ್ರಾ ಗೌಡ ಅವರಿಗೆ ಪದೇಪದೇ ಗುರುತಿಸಲಾಗದ ಮೊಬೈಲ್ ಫೋನ್ ನಂಬರಿನಿಂದ ಕರೆ ಮಾಡಿ ತೊಂದರೆ ಕೊಡುತ್ತಿದ್ದ ಎನ್ನಲಾದ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿ ಹಲ್ಲೆಗೈದು ಕೊಲೆ ಮಾಡಿಲಾಗಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಪ್ರಮುಖ ಆರೋಪಿಯಾಗಿದ್ದಾರೆ.

