ಅಪರಾಧ ಸುದ್ದಿ

ಸಾರಿಗೆ ನೌಕರರ ಪ್ರತಿಭಟನೆ ವೇಳೆ ತಳ್ಳಾಟ: ಕಚೇರಿಯ ಪೀಠೋಪಕರಣ ದ್ವಂಸ

Share It

ಬೆಂಗಳೂರು: ಸಾರಿಗೆ ಒಕ್ಕೂಟದ ಪ್ರತಿಭಟನೆ ವೇಳೆ ಗದ್ದಲ ನಡೆದದ್ದು, ಕಚೇರಿಗೆ ನುಗ್ಗಿದ ಚಾಲಕರು ಪೀಠೋಪಕರಣ ದ್ವಂಸ ಮಾಡಿರುವ ಘಟನೆ ನಡೆದಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಸಾರಿಗೆ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಾರಿಗೆ ಆಯುಕ್ತರಿಗೆ ಮನವಿ ಮಾಡಲು ಕಾರ್ಯಕರ್ತರು ಮುಂದಾದರು. ಆದರೆ, ಪೊಲೀಸರು ಬಾಗಿಲಿನಲ್ಲೇ ತಡೆದರು.

ಈ ವೇಳೆ ಗೊಂದಲ ಉಂಟಾಗಿ ಕಚೇರಿಯೊಳಗೆ ನುಗ್ಗಿದ ಚಾಲಕರು ಮತ್ತು ಕಾರ್ಯಕರ್ತರು ಪೊಲೀಸರ ವಿರುದ್ಧ ವಾಗ್ವಾದಕ್ಕಿಳಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ರೊಚ್ಚಿಗೆದ್ದ ಕಾರ್ಯಕರ್ತರು ಕಚೇರಿಯ ಪೀಠೋಪಕರಣ ಗಳನ್ನೆ ದ್ವಂಸಗೊಳಿಸಿದ್ದಾರೆ. ಅನಂತರ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ವರದಿಯಾಗಿದೆ.


Share It

You cannot copy content of this page