ಅಪರಾಧ ಸುದ್ದಿ

ರೌಡಿಶೀಟರ್ ಕೊಲೆ ಪ್ರಕರಣ : ಶಾಸಕ ಬೈರತಿ ಬಸವರಾಜ್‌ಗೆ ವೈದ್ಯಕೀಯ ತಪಾಸಣೆ

Share It

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಸಿಐಡಿ ಬಂಧನದಲ್ಲಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

ಬೈರತಿ ಬಸವರಾಜ್ ಅವರಿಗೆ ಹೃದಯಸಂಬಂಧಿ ಸಮಸ್ಯೆಗಳಿದ್ದು, ಅವರಿಗೆ ವೈದ್ಯಕೀಯ ತಪಾಸಣೆ ನಡೆಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು, ಜಯದೇವ ಆಸ್ಪತ್ರೆಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ.

ಆಂಜಿಯೋಗ್ರಾಮ್ ಮಾಡಿಸಿದ್ದು, ಸಂಜೆಯ ವೇಳೆಗೆ ರಿಪೋರ್ಟ್ ಬರಲಿದ್ದು, ಉಳಿದೆಲ್ಲ ರಿಪೋರ್ಟ್ ನಾಳೆಯ ವೇಳೆಗೆ ಸಿಗಲಿದೆ. ಹೀಗಾಗಿ, ಒಟ್ಟಾರೆ, ಎಲ್ಲ ತಪಾಸಣಾ ವರದಿಯನ್ನು ಪಡೆದು ನಾಳೆ ಅಥವಾ ಸೋಮವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.


Share It

You cannot copy content of this page