ಅಪರಾಧ ಸುದ್ದಿ

ಶಿವಮೊಗ್ಗದ ಡಿಐಆರ್ ಡಿವೈಎಸ್‌ಪಿ ಲೋಕಾಯುಕ್ತ ಬಲೆಗೆ: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆ

Share It

ಶಿವಮೊಗ್ಗ: ಲಂಚ ಪಡೆಯುವಾಗ ಶಿವಮೊಗ್ಗ ಡಿಐಆರ್ ಡಿವೈಎಸ್‌ಪಿ ಕೃಷ್ಣಮೂರ್ತಿ ಲೋಕಾಯುಕ್ತ ಬಲೆಗೆ ಬಿದದಿದ್ದಾರೆ.

ಶಿವಮೊಗ್ಗ ಡಿಐಆರ್ ಡಿವೈಎಸ್‌ಪಿಯಾಗಿರುವ ಕೃಷ್ಣಮೂರ್ತಿ ಪೊಲೀಸರಿಂದ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್‌ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಡಿವೈಎಸ್‌ಪಿ ತಮ್ಮ ಡ್ಯೂಟಿಯ ವಿಚಾರದಲ್ಲಿ ಲಂಚ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಲು ತೀರ್ಮಾನಿಸಿದ್ದರು. ಈ ವೇಳೆ ಪೊಲೀಸರಿಂದ ಲಂಚ ಸ್ವೀಕಾರ ಮಾಡುವಾಗ ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆಯಲಾಗಿದೆ.


Share It

You cannot copy content of this page