ದಲಿತ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ: ಡಾ.ಜಿ ಪರಮೇಶ್ವರ್

Share It

ಬೆಂಗಳೂರು: ದಲಿತ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ವತಿಯಿಂದಲೇ ಅಹಿಂದ ಸಮಾವೇಶ ಆಯೋಜನೆ ಮಾಡಲಾಗುತ್ತದೆ. ಅಂತೆಯೇ ದಲಿತ ಸಮಾವೇಶವೂ ನಡೆಯಲಿದೆ. ದಲಿತ ಶಕ್ತಿಯ ಪ್ರದರ್ಶನ ಆಗಬೇಕೆಂದರೆ, ದಲಿತ ಸಮಾವೇಶ ಆಗಲೇಬೇಕು. ಹೀಗಾಗಿ, ದಲಿತ ಸಮಾವೇಶ ಮಾಡಿಯೇ ಮಾಡುತ್ತೇವೆ ಎಂದರು.

ಎಲ್ಲ ಸಮಾವೇಶಗಳು ಕಾಂಗ್ರೆಸ್ ಪಕ್ಷದಡಿಯಲ್ಲಿಯೇ ನಡೆಯಲಿವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಪಕ್ಷದ ಶಕ್ತಿಯನ್ನು ವಋದ್ಧಿಗೊಳಿಸುವುದೇ ನಮ್ಮ ಉದ್ದೇಶ ಎಂದಿದ್ದಾರೆ. ಸಿಎಂ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿರುವ ಹೊತ್ತಿನಲ್ಲೇ ಪರಮೇಶ್ವರ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.


Share It

You May Have Missed

You cannot copy content of this page