ರಾಜಕೀಯ ಸುದ್ದಿ

ರಾಜ್ಯ ಸರ್ಕಾರ ಐಸಿಯುನಲ್ಲಿದೆ: ವಿಪಕ್ಷ ನಾಯಕ ಆರ್ ಅಶೋಕ ಕೆಂಡಾಮಂಡಲ

Share It

ಕಲಬುರಗಿ:

ಸಿಎಂ ಸಿದ್ರಾಮಯ್ಯಗೆ ಝಿರೋ ನಾಲೆಡ್ಜ್ ಇದೆ. ವರ್ಷದಲ್ಲಿ ಏನೆನು ಬರುತ್ತೆ ಅಂತ ಗೊತ್ತಿಲ್ಲ ಅಂದ್ರೆ ಸಮರ್ಥ ಫೈನಾನ್ಸ್ ಮಿನಿಸ್ಟರ್ ಹೇಗಾಗ್ತಿರಾ? ಎಂದು ವಿಪಕ್ಷ ನಾಯಕ ಆರ್ ಅಶೋಕ ಕಿಡಿಕಾರಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್.ಅಶೋಕ ಪೆದ್ದ, ಬುದ್ದಿ ಇಲ್ಲ ಎನ್ನುವ ಸಿಎಂ ಸಿದ್ದರಾಮಯ್ಯಾ ಹೇಳಿಕೆಗೆ ಆರ್ ಅಶೋಕ ಕೆಂಡಾಮಂಡಲರಾದರು‌, 15 ಬಜೆಟ್ ಮಂಡನೆ ಮಾಡಿದಿಯಲ್ಲಪ್ಪಾ ಇದೆನಾ ನಿನ್ನ ನಾಲೆಡ್ಜ್ ? ವರ್ಷದಲ್ಲಿ ಏನೇನು ಬರುತ್ತೆ ಅಂತಾನೇ ಗೊತ್ತಿಲ್ಲ..! ಎನ್ನುವ ಮೂಲಕ ಖಡಕ್ ಗಾಗಿ ಪ್ರತಿಕ್ರಿಯಿಸಿದ್ದಾರೆ. ಎಂಬತ್ತು ಸಾವಿರ ಕೋಟಿ ರೂ. ಗ್ಯಾರೆಂಟಿಗಳಿಗೆ ಕೊಟ್ಟಿರಲಿಲ್ಲ ಅಂದ್ರೆ ಎಲ್ಲಾ ದರ ಹೆಚ್ಚಳ ಮಾಡುವ ದರಿದ್ರತನ ಬರ್ತಿರ್ತಾ..? ಪೆಟ್ರೋಲ್ ಡೀಸೆಲ್, ಮುದ್ರಾಂಕ , ಎಲ್ಲಾ ಹೆಚ್ಚಳ ಮಾಡಿದಿರಿ ಇನ್ನೇನು ದರಿದ್ರ ನಿಮಗೆ.? ರಾಜ್ಯದಲ್ಲಿ ಟ್ಯಾಕ್ಸ ಏರಿಕೆಯ ಪರ್ವ ಶುರುವಾಗಿದೆ ಜನರು ರೆಡಿಯಾಗಿರಿ ಎಂದು ತಿರುಗೇಟು ನೀಡಿದರು.

ಜನರ ಪ್ರಾಣಕ್ಕಿಂತ ಎಲೆಕ್ಷನ್ ಮುಖ್ಯ..!

ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೂನ್ 16,17,18 ರಂದು ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಆಪರೇಷನ್ ಮಾಡದೇ ಮುಂದೂಡಿದ್ದಾರೆ. ಹಾರ್ಟ್ ಆಪರೇಷನ್ ಅಂದ್ರೆ ಕ್ಷಣ ಕ್ಷಣವೂ ಮಹತ್ವ ಇರುತ್ತೆ. ಸರ್ಜರಿ ಮಾಡದೇ ನಿರ್ಲಕ್ಷ್ಯ ಮಾಡಿದ್ದು ಸರಕಾರದ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ.

ಕರ್ನಾಟಕ ದೇಶದಲ್ಲಿಯೇ ಮುಂದುವರೆದ ರಾಜ್ಯವಾಗಿದೆ. ದೇಶ ವಿದೇಶದಿಂದ ಜಯದೇವಕ್ಕೆ ಜನ ಬರ್ತಾರೆ. ದೇಶದಲ್ಲಿ ಜಯದೇವ ಆಸ್ಪತ್ರೆಗೆ ಒಳ್ಳೆಯ ಗೌರವ ಇತ್ತು. ಈ ಸರಕಾರದ ನಿರ್ಲಕ್ಷ ತನದಿಂದ ಜಯದೇವ ಆಸ್ಪತ್ರೆ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಸರಕಾರದಲ್ಲಿ ದುಡ್ಡಿಲ್ಲ, ಪಾಪರ್ ಆಗಿದೆ ಅಂತ ಹೇಳ್ತಿದ್ವಿ. ಯಾರೂ ನಂಬುತ್ತಿರಲಿಲ್ಲ. ಮೂರು ದಿನ ನೀರು ಖರೀದಿಸಲು 20 ಲಕ್ಷ ಖರ್ಚಾಗಬಹುದಿತ್ತು ಅದೂ ಈ ಸರಕಾರದ ಬಳಿ ಇಲ್ಲ ಎಂದು ಗುಡುಗಿದರು.

ಇಷ್ಟೆಲ್ಲಾ ಆದ್ರೂ ಸಿಎಂ ಒಂದೇ ಒಂದು ರಿವ್ಯೂ ಮೀಟಿಂಗ್ ಮಾಡಿಲ್ಲ. ಡಿಸಿಎಂ ಚನ್ನಪಟ್ಟಣ ಎಲೆಕ್ಷನ್ ಕಡೆ ಹೊರಟಿದ್ದಾರೆ. ಅವರಿಗೆ ಜನರ ಪ್ರಾಣಕ್ಕಿಂತ ಎಲೆಕ್ಷನ್ ಮುಖ್ಯವಾಗಿದೆ. ಜಯದೇವ ಸಂಸ್ಥೆಯನ್ನು ಮಂಜುನಾಥ್ ಅವರು ಕಟ್ಟಿ ಬೆಳೆಸಿದ ಗೌರವವನ್ನು ಇವರು ಮಣ್ಣು ಪಾಲು ಮಾಡಿದ್ದಾರೆ. ಸಿಎಂ ಮನೆಯಲ್ಲಿಯೇ ಹೀಗಾದ್ರೆ ಬಿಡ್ತಿದ್ರಾ..? ಯಾರನ್ನು ಸಸ್ಪೆಂಡ್ ಮಾಡಿದಿರಾ ? ಯಾರನ್ನೂ ಇಲ್ಲ.. ಕೇಳಿದ್ರೆ ಬರೀ ಮೂರು ದಿನ ಅಂತಾರೆ. ಇದು ಆಸ್ಪತ್ರೆಯ ಹಾಗೂ ಪಾಲಿಕೆಯ ವೈಫಲ್ಯ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಐಸಿಯುನಲ್ಲಿದೇ..!

ಕಲುಷಿತ ನೀರು ಸೇವನೆಯಿಂದ ತುಮಕೂರಿನಲ್ಲಿ ಆರು ಜನ ಸೇರಿದಂತೆ ರಾಜ್ಯದಲ್ಲಿ 10-15 ಜನ ಸತ್ತಿದ್ದಾರೆ. ಈ ವಿಚಾರದಲ್ಲಿ ಸಿಎಂ ಸಸ್ಪೆಂಡ್ ಮಾಡ್ತಿನಿ ಅಂತ ಮಾನದ ಮಾಡಿದ್ರು ಒಬ್ಬನಿಗೂ ಸಸ್ಪೆಂಡ್ ಮಾಡಿಲ್ಲ. ರಾಜ್ಯದಲ್ಲಿ ಸರಕಾರ ಇದೆಯೋ ಸತ್ತಿದೆಯೋ ಗೊತ್ತಿಲ್ಲ. ಆಸ್ಪತ್ರೆಯಲ್ಲಿ ನೀರು, ವಿದ್ಯುತ್ ಕೊರತೆಯಾಗಬಾರದು. ಆದ್ರೆ ಸರಕಾರ ಜನರ ಪ್ರಾಣದ ಜೊತೆ ಚಲ್ಲಾಟ ಆಡುತ್ತಿದೆ. ಇವತ್ತಿನ ಸ್ಥಿತಿ ನೋಡಿದ್ರೆ ಸರಕಾರವೇ ಐಸಿಯುನಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


Share It

You cannot copy content of this page