ಸುದ್ದಿ

ಸರಣಿಯ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾಗೇ ಭರ್ಜರಿ ಜಯ.

Share It

ಶಿವರಾಜು. ವೈ. ಪಿ
ಎಲೆರಾಂಪುರ.

ಪಾಲೇಕಲೆ (ಶ್ರೀಲಂಕಾ) : ಶನಿವಾರ ಪಾಲೇಕಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೂರು ಟಿ 20 ಪಂದ್ಯಗಳ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 23 ರನ್ ಗಳಿಂದ ಭರ್ಜರಿ ಜಯಗಳಿಸಿತು. ಟೀಮ್ ಇಂಡಿಯಾ ಆತಿಥೇಯ ತಂಡವನ್ನು ಆಲ್ಓಟ್ ಮಾಡುವ ಮೂಲಕ ಸರಣಿಯ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಚರಿತ್ ಅಸಲಂಕ ನಾಯಕತ್ವದ ಶ್ರೀಲಂಕಾ ತಂಡ ತನ್ನ ಬೌಲಿಂಗ್ ಪ್ರದರ್ಶನದಿಂದ ಟೀಮ್ ಇಂಡಿಯಾವನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. 20 ಓವರ್ ಗಳಲ್ಲಿ ಶ್ರೀಲಂಕಾ ಬಿಟ್ಟುಕೊಟ್ಟಿದ್ದು ಬರೋಬ್ಬರಿ 213 ರನ್.

ಟೀಮ್ ಇಂಡಿಯಾದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಜೊತೆಯಾಟ ಆಡಿದರು. ನಂತರ ಶುಭ್ಮನ್ ಗಿಲ್ 16 ಬಾಲ್ ಗಳಲ್ಲಿ 34 ರನ್ ಗಳಿಸಿ ವಿಕೆಟ್ ಒಪ್ಪಿಸಿದರು . ಬಳಿಕ ಯಶಸ್ವಿ ಜೈಸ್ವಾಲ್ 21 ಬಾಲ್ ಗಳಲ್ಲಿ 2 ಸಿಕ್ಸರ್ 5 ಬೌಂಡರಿ ಸಹಿತ 40 ರನ್ ಚಚ್ಚಿದರು. ನಂತರ ಕಣಕ್ಕಿಳಿದ ನಾಯಕ ಸೂರ್ಯ ಕುಮಾರ್ ಯಾದವ್ 26 ಬಾಲ್ ಗಳಲ್ಲಿ 2 ಸಿಕ್ಸರ್ 8 ಬೌಂಡರಿ ಸೇರಿ 58 ರನ್ ಗಳಿಸಿ ಅರ್ಧ ಶತಕ ಪೂರೈಸಿದರು. ಇನ್ನೊಂದು ಕೊನೆಯಲ್ಲಿ ನಾಯಕನ ಜೊತೆ ನಿಂತ ಕೀಪರ್ ರಿಷಬ್ ಪಂತ್ 33 ಬಾಲ್ ಗಳಲ್ಲಿ 49 ರನ್ ಗಳಿಸಿ ಅರ್ಧ ಶತಕ ವಂಚಿತರಾದರು. ನಂತರ ಟೀಮ್ ಇಂಡಿಯಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 213 ರನ್ ಗಳ ಬೃಹತ್ ಮೊತ್ತವನ್ನು ನೀಡಿತು.

ಇನ್ನೂ ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಪತುಮ್ ನಿಸ್ಸಾಂಕಾ ಮತ್ತು ಕುಶಾಲ್ ಮೆಂಡಿಸ್ ಭರ್ಜರಿ ಆರಂಭ ನೀಡಿದರು ಪತುಮ್ ನಿಸ್ಸಾಂಕ 48 ಬಾಲ್ ಗಳಲ್ಲಿ ಬರೋಬ್ಬರಿ 79 ರನ್ ಸಿಡಿಸಿದರು. ಜೊತೆಗೆ ಬ್ಯಾಟ್ ಬೀಸಿದ ಕುಶಾಲ್ ಮೆಂಡಿಸ್ 27 ಬಾಲ್ ಗಳಲ್ಲಿ 45 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇವರಿಬ್ಬರ ಹೋರಾಟ ಬಿಟ್ಟರೆ ಶ್ರೀಲಂಕಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಇನ್ನು ಯಾವ ಆಟಗಾರರೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಂತು ಸದ್ದು ಮಾಡಲಿಲ್ಲ .

ಭಾರತದ ಪರ ಬೌಲ್ ಮಾಡಿದ ರಿಯಾನ್ ಪರಾಗ್ 3 ವಿಕೆಟ್, ಆರ್ಶದೀಪ್ ಸಿಂಗ್ ಹಾಗೂ ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದರು.ನಂತರ ಶ್ರೀಲಂಕಾ ಆಟಗಾರರು 213 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಲು ವಿಫಲರಾದರು. ಕೊನೆಗೆ ಶ್ರೀಲಂಕಾ 19.2 ಓವರ್ ಗಳಲ್ಲಿ 170 ರನ್ ಗಳಿಸಿ ಆಲ್ ಔಟ್ ಆದರು. ಈ ಮೂಲಕ ಟೀಮ್ ಇಂಡಿಯಾ ಸರಣಿಯ ಮೊದಲ ಪಂದ್ಯವನ್ನು ಗೆದ್ದು ಶುಭಾರಂಭ ಮಾಡಿದೆ.


Share It

You cannot copy content of this page