ಅಪರಾಧ ಸುದ್ದಿ

ಕಾರ್ಮಿಕರೇ ಕಳ್ಳರಾದರು

Share It

ಭದ್ರಾವತಿ : ಮಾಲೀಕ ಕಾರ್ಖಾನೆಯಿಂದ ಹೊರ ಹೋಗಿದ್ದ ಸಂದರ್ಭ ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ನೌಕರರು ಪರಾರಿಯಾಗಿದ್ದಾರೆ ನೇಪಾಳದ ಕಾರ್ಮಿಕರು.

ಚಿದಾನಂದ ಎಂಬುವವರು ಭದ್ರಾವತಿ ತಾಲೂಕು ಗೌಡರಹಳ್ಳಿಯ ತೋಟವೊಂದರಲ್ಲಿ ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಿದ್ದರು. ನಡೆಸುತ್ತಿದ್ದಾರೆ. ಇತ್ತೀಚೆಗೆ 40 ಸಾವಿರ ರೂ. ಹಣ ನೀಡುವಂತೆ ಕಾರ್ಮಿಕರು ಚಿದಾನಂದ ಬಳಿ ಕೇಳಿದ್ದರು. ಹಣಕಾಸು ಸಮಸ್ಯೆಯಿಂದ ಚಿದಾನಂದ ಹಣ ನೀಡಿರಲಿಲ್ಲ. ಇನ್ನೊಂದೆಡೆ ಕರೆಂಟ್‌ ಬಿಲ್‌ ಪಾವತಿಸದ ಹಿನ್ನೆಲೆ ಜೂ.5ರಂದು ಮೆಸ್ಕಾಂ ಸಿಬ್ಬಂದಿ ವಿದ್ಯುತ್‌ ಕಡಿತಗೊಳಿಸಿದ್ದರು.

ಕರೆಂಟ್‌ ಬಿಲ್‌ ಪಾವತಿಸಲು ಹಣ ಹೊಂದಿಸಿಕೊಂಡು ಭದ್ರಾವತಿಗೆ ಜೂ.5 ರಂದು ತೆರಳಿದ್ದರು. ರಾತ್ರಿ 10 ಗಂಟೆಗೆ ಹಿಂತಿರುಗಿದಾಗ, ಯಾವುದೋ ವಾಹನ ಫ್ಯಾಕ್ಟರಿ ಬಳಿ ಬಂದು ಹೋಗಿರುವುದು ಚಿದಾನಂದಗೆ ಗೊತ್ತಾಗಿದೆ. ಫ್ಯಾಕರಿಗೆ ತೆರಳಿ ಮೊಬೈಲ್‌ ಟಾರ್ಚ್‌ನಲ್ಲಿ ಪರಿಶೀಲಿಸಿದಾಗ ಒಂದು ಲ್ಯಾಪ್‌ಟಾಪ್‌, 10 ಬ್ಯಾಗ್‌ ಅಡಿಕೆ ತಟ್ಟೆ, ಅಡಿಕೆ ಹಾಳೆ ತಯಾರಿಸುವ 12 ಅಚ್ಚುಗಳು ನಾಪತ್ತೆಯಾಗಿದ್ದವು. ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ದಿನೇಶ, ಆತನ ಪತ್ನಿ ನಿರ್ಮಲಾ, ಪ್ರಕಾಶ್‌, ಆತನ ಪತ್ನಿ ಮನ್ಸೂರ ಕಾಣೆಯಾಗಿದ್ದರು. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page