ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಮತ್ತೊಂದು ವಿಕೆಟ್ ಬೀಳುವ ಸಾಧ್ಯತೆ ಇದ್ದು, DPAR ಕಾರ್ಯದರ್ಶಿ ಸತ್ಯವತಿ ಅವರನ್ನು ಅಮಾನತುಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ವಿಧಾನಸೌಧದ ಮುಂಭಾಗ ಸಮಾರಂಭ ಆಯೋಜನೆ ಮಾಡುವ ಸಂಬಂಧ ಕಾರ್ಯದರ್ಶಿ ಅವರಿಗೆ ವಿಧಾನಸೌಧದ ಭದ್ರತಾ ವಿಭಾಗದ ಡಿಸಿಪಿ ಅವರು ಬರೆದಿರುವ ಪತ್ರ ಇದೀಗ ಸತ್ಯವತಿ ಅವರಿಗೆ ಮುಳುವಾಗಲಿದೆ. ಕಾರ್ಯಕ್ರಮದ ದಿನವೇ ಡಿಸಿಪಿ, ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಕಾಲಾವಕಾಶ ಬೇಕು ಎಂದು ತಿಳಿಸಿದ್ದರು ಎನ್ನಲಾಗಿದೆ.
ವಿಧಾನಸೌಧಕ್ಕೆ ಕೊಡುವ ಪಾಸ್ ಸ್ಥಗಿತಗೊಳಿಸಬೇಕು. ಸಿಬ್ಬಂದಿಗೆ ನೀಡುವ ಪಾಸ್ ನಿಲ್ಲಿಸಬೇಕು. ವಿಧಾನಸೌಧದ ಸಿಬ್ಬಂದಿ ತಮ್ಮ ಸಂಬಂಧಿಕರು, ಸ್ನೇಹಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಹೆಚ್ಚುವರಿ ಸಿಬ್ಬಂದಿ ಕರೆಸಿಕೊಳ್ಳಲು ಕಾಲಾವಕಾಶ ಬೇಕು ಎಂದು ತಿಳಿಸಿದ್ದರು.