ರಾಜಕೀಯ ಸುದ್ದಿ

ವಚನ ಭ್ರಷ್ಟೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡಲಿ: ಯಾದವ ರೆಡ್ಡಿ

Share It

ಚಿತ್ರದುರ್ಗ : ತಾಂತ್ರಿಕ ಕಾರಣದ ನೆಪವೊಡ್ಡಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಹಾ ಮೋಸ, ದ್ರೋಹ ಮಾಡುತ್ತಿದೆ ಎಂದು ಸರ್ವೋದಯ ಪಕ್ಷದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆ.ಯಾದವ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಅವರು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನೀರಾವರಿ ಯೋಜನೆಗಳಿಗೆ ಯಾವುದೇ ಕಂಡೀಷನ್ ಹಾಕದೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.

ಆದರೆ ಕರ್ನಾಟಕದ ನೆಲ, ಜಲಕ್ಕೆ ಮಾತ್ರ ಕೇಂದ್ರ ಕಂಡೀಷನ್ ಹಾಕಿದೆ. ಕರ್ನಾಟಕಕ್ಕೆ ಮಾತ್ರ ದುಡ್ಡಿಲ್ವ? ಕರ್ನಾಟಕದಿಂದಲೇ ಸತತ 2 ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ 2ನೇ ಬಾರಿಗೆ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ವಚನ ಭ್ರಷ್ಟೆ, ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.


Share It

You cannot copy content of this page