ರಾಜಕೀಯ ಸುದ್ದಿ

ಸಂಸದರ ಮನೆ ಮುಂದೆ ತಮಟೆ ಚಳುವಳಿ ನಡೆಸಿದ ಸಂಘಟನೆಗಳು

Share It

ಚಿತ್ರದುರ್ಗ : ಮಧ್ಯ ಕರ್ನಾಟಕದ ಬರದ ನಾಡು ಚಿತ್ರದುರ್ಗ ಜಿಲ್ಲೆಯ ಸಂಜೀವಿನಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅವರ ಮನೆ ಮುಂದೆ ತಮಟೆ ಚಳುವಳಿ ನಡೆಸಿದವು.

ನಗರದ ಪ್ರಮುಖ ರಸ್ತೆ ಮೂಲಕ ಪ್ರತಿಭಟನಾಕಾರರು ತಮಟೆ ಬಡಿಯುತ್ತಾ ಮೆರವಣಿಗೆಯಲ್ಲಿ ಕಾಲ್ನಡಿಗೆಯಲ್ಲಿ ಜೆಸಿಆರ್ ವೃತ್ತದಲ್ಲಿರುವ ಸಂಸದ ಗೋವಿಂದ ಕಾರಜೋಳ ಅವರ ಮನೆ ಮುಂದೆ ತಮಟೆ ಚಳುವಳಿ ನಡೆಸಿದರು.

ಚಳುವಳಿಯಲ್ಲಿ ರೈತ ಸಂಘಟನೆಗಳು, ಸಿಪಿಐ ಪಕ್ಷ, ಕರುನಾಡ ವಿಜಯಸೇನೆ ಕಾರ್ಯಕರ್ತರು ಭಾಗವಹಿಸಿದ್ದರು.


Share It

You cannot copy content of this page