ಉಪಯುಕ್ತ ರಾಜಕೀಯ ಸುದ್ದಿ

SC/ST ಪತ್ರಕರ್ತರ, ಸಂಪಾದಕರ ಆರ್ಥಿಕ ಸ್ಥಿತಿಗತಿ ಅಧ್ಯಯನಕ್ಕೆ ಸಮಿತಿ ರಚಿಸಿದ ಸರಕಾರ

Share It

ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ SC/ST ಸಮುದಾಯದ ಪತ್ರಕರ್ತರ ಮತ್ತು ಸಂಪಾದಕರ ಆರ್ಥಿಕ, ಸಾಮಾಜಿಕ ಸ್ಥಿತಿಗಳ ಅಧ್ಯಯನ ನಡೆಸಲು ಸಮಿತಿಯೊಂದನ್ನು ರಚಿಸಿ ಸರಕಾರದ ಆದೇಶ ಹೊರಡಿಸಿದೆ.

ಕನ್ನಡ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಪತ್ರಕರ್ತರು ಮತ್ತು ಸಂಪಾದಕರು ಆರ್ಥಿಕ ಸಂಕಷ್ಟದಲ್ಲಿದ್ದು, ಅವರ ಜೀವನನಟ್ಟ ಸುಧಾರಣೆ ಮಾಡಿವ ನಿಟ್ಟಿನಲ್ಲಿ ಕ್ರಮವಹಿಸಲು ಸರಕಾರದ ಮೇಲೆ ಒತ್ತಡ ಹೇರಲಾಗಿತ್ತು.

ಈ ಹಿನ್ನಡೆಯಲ್ಲಿ ಸರಕಾರ ಸಮಿತಿಯನ್ನು ರಚನೆ ಮಾಡಿದ್ದು, ಕೆ.ಶಿವಕುಮಾರ್, ಎಂ.ಡಿ.ಶಿವಕುಮಾರ್ ಬೆಳ್ಳಿತಟ್ಟೆ, ಎ.ಲಾವಣ್ಯ, ಚೆಲುವರಾಜ್, ಆರ್.ತಾರಾನಾಥ್ ಮತ್ತು ಮುತ್ತು ನಾಯ್ಕರ್ ಅವರನ್ನೊಳಗೊಂಡ ಸಮಿತಿ ರಚಿಸಿ ಸರಕಾರ ಆದೇಶ ನೀಡಿದೆ.


Share It

You cannot copy content of this page