ಅಪರಾಧ ರಾಜಕೀಯ ಸುದ್ದಿ

ಚುನಾವಣಾ ಬಾಂಡ್ ಅಕ್ರಮ: ನಳೀಲ್ ಕುಮಾರ್ ಕಟೀಲ್‌ಗೆ ಸುಪ್ರೀಂ ರಿಲೀಫ್

Share It

ಹೊಸದಿಲ್ಲಿ: ಚುನಾವಣಾ ಬಾಂಡ್ ಅಕ್ರಮ ಆರೋಪದಲ್ಲಿ ನಳೀನ್ ಕುಮಾರ್ ಕಟೀಲ್‌ಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ.

ಚುನಾವಣೆ ಅಕ್ರಮ ನಡೆಸಿದ್ದು, ಬಾಂಡ್ ಮೂಲಕ ಅಕ್ರಮ ಹಣವನ್ನು ಪಡೆಯಲಾಗಿದೆ ಎಂದು ಆರೋಪ ಮಾಡಲಾಗಿತ್ತು. ಇದಕ್ಕೆ ಸಂಬಂಧ ಎಫ್‌ಐಆರ್ ದಾಖಲಿಸಲಾಗಿತ್ತು. ಈ ಎಫ್‌ಐಆರ್ ಅನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿತ್ತು.

ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಜನಾಧಿಕಾರ ಸಂಘರ್ಷ ಸಮಿತಿಯ ಆದರ್ಶ ಅಯ್ಯರ್ ಎಂಬುವವರು ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ಆದರೆ, ಸುಪ್ರೀಂ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದ್ದು, ಹೈಕೋರ್ಟ್ ಎಫ್‌ಐಆರ್ ರದ್ದುಗೊಳಿಸಿದ ಕ್ರಮ ಸರಿಯಿದೆ ಎಂದು ತಿಳಿಸಿದೆ.


Share It

You cannot copy content of this page