BREAKING ರಾಷ್ಟ್ರ ರಾಜಧಾನಿಗೆ ಹೊಸ ಬಿಜೆಪಿ ಸಾರಥಿ ಘೋಷಣೆ

Share It

ದೆಹಲಿ : ರಾಷ್ಟ್ರ ರಾಜಧಾನಿಗೆ ಬಿಜೆಪಿಯ ನೂತನ ಮುಖ್ಯಮಂತ್ರಿಯ ಘೋಷಣೆಯಾಗಿದೆ. ರೇಖಾ ಗುಪ್ತಾ ಅವರನ್ನು ನೂತನ ಮುಖ್ಯಮಂತ್ರಿ ಯನ್ನಾಗಿ ಘೋಷಣೆ ಮಾಡಲಾಗಿದೆ.

ಈ ಮೂಲಕ ದೆಹಲಿಗೆ ಸುಷ್ಮಾ ಸ್ವರಾಜ್, ಆಶಿತಿ, ಶೀಲಾ ದೀಕ್ಷಿತ್ ನಂತರ ಮತ್ತೊಮ್ಮೆ ಮಹಿಳಾ ಮುಖ್ಯಮಂತ್ರಿಗಳಾಗಿ ರೇಖಾ ಆಯ್ಕೆಯಾಗಿದ್ದಾರೆ. ಹತ್ತು ದಿನಗಳ ಹಿಂದೆ ನಡೆದ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.

ಇದೀಗ ಬುಧವಾರದಂದು ಬಿಜೆಪಿಯ ನೂತನ ಮುಖ್ಯಮಂತ್ರಿಯ ಘೋಷಣೆ ಮಾಡಲಾಗಿದ್ದು ಗುರುವಾರ ನೂತನ ಮುಖ್ಯಮಂತ್ರಿ ಸೇರಿದಂತೆ ಕೆಲ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ದೆಹಲಿಯಲ್ಲಿ 27 ವರ್ಷಗಳ ನಂತರ ಬಿಜೆಪಿ ಮತ್ತೆ ಸರಕಾರ ರಚಿಸುತ್ತಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಕಮಲ ಪಕ್ಷ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಇತಿಹಾಸ ಸೃಷ್ಟಿಸಿದೆ.


Share It

You May Have Missed

You cannot copy content of this page