ಹೊಸಕೋಟೆ: ಕುವೆಂಪು ಅವರು ಸಾಹಿತ್ಯದ ಮೂಲಕ ಜಾತಿ, ಧರ್ಮವನ್ನು ಮೀರಿದ ಸಮಾಜವನ್ನು ಕಟ್ಟುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದ ಕಾರಣ ಅವರ ಸಾಹಿತ್ಯ ಪ್ರಜಾಪ್ರಭುತ್ವದ ಪ್ರೀತಕವಾಗಿದೆ ಎಂದು ಉಡುಪಿ ಜಿಲ್ಲೆಯ ಹಿರಿಯಡ್ಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯಪ್ರಕಾಶ್ ಶೇಟ್ಟಿ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕುವೆಂಪು ಶ್ರೀ ರಾಮಾಯಣದರ್ಶನಂ ಕೃತಿಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುವೆಂಪು ಅವರ ರಾಮಾಯಣ ದರ್ಶನ ಮುಖ್ಯವಾಗಿ ತುಳಿತಕ್ಕೆ ಒಳಗಾಗಿದ್ದ ತಳ ಸಮುದಾಯ ಮತ್ತು ಮಹಿಳೆಯರನ್ನು ಸಮಾನ ದೃಷ್ಟಿಯಿಂದ ಕಾಣುವ ಒಂದು ಹೊಸ ಚಿಂತನೆಗೆ ನಾಂದಿಯನ್ನು ಹಾಡಿದ ಕೃತಿ.ರಾಮಾಯಣ ದರ್ಶನo ರಚನೆ ಹೊಸ ಆಯಮವನ್ನು ನೀಡಿದೆ,ಸಂವಿಧಾನದ ಪೀಠಿಕೆ ಬೋಧಿಸುವ ಎಲ್ಲಾ ಅಂಶಗಳನ್ನು ತಮ್ಮ ಸಾಹಿತ್ಯದ ಮೂಲಕ ಆಚರಣೆಗೆ ತರುವ ಕೆಲಸವನ್ನು ಕುವೆಂಪು ಮಾಡಿದರು.
ಆದ್ದರಿಂದ ಕನ್ನಡದಲ್ಲಿ ರಾಮಾಯಣದ ಕುರಿತು ಹಲವು ಕೃತಿಗಳು ಬಂದಿದ್ದರೂ, ಶ್ರೀ ರಾಮಾಯಣದರ್ಶನಂ ಎಂದೆoದಿಗೂ ಮೇರು ಸ್ಥಾನದಲ್ಲಿ ನಿಲ್ಲುವ ಕೃತಿಯಾಗಿದೆ. ಶ್ರೇಷ್ಠತೆಯ ವ್ಯಸನವು ನಮ್ಮ ದೇಹದ ಅಂಗಗಳನ್ನೇ ಶ್ರೇಷ್ಠ ಕನಿಷ್ಟ ಎಂದು ವಿಭಾಗಿಸುತ್ತಿದ್ದೇವೆ. ಈ ವ್ಯಸನದಿಂದ ನಮ್ಮನ್ನು ದೂರ ಮಾಡುವ ಎಲ್ಲಾ ವೈಚಾರಿಕ ಸಂಗತಿಗಳು ಶ್ರೀ ರಾಮಾಯಣ ದರ್ಶನಂ ಕೃತಿಯಲ್ಲಿವೆ ಎಂದರು.
ಬುದ್ಧ, ಬಸವ, ಅಂಬೇಡ್ಕರ್, ಫುಲೆ ವಿಚಾರಧಾರೆಗಳ ಆಗರವಾಗಿರುವ ಕುವೆಂಪು ಚಿಂತನೆಗಳನ್ನು ಜನರಿಗೆ ದೊರೆಯದಂತೆ ಒಂದು ವರ್ಗ ಸಂಕುಚಿತಗೊಳಿಸುವ ಕೆಲಸವನ್ನು ಮಾಡುತ್ತಿವೆ. ಆ ನಿಟ್ಟಿನಲ್ಲಿ ವೈಚಾರಿಕತೆಗೆ ವಿರುದ್ಧವಾಗಿ ಜನರ ಮದ್ಯೆ ಕುವೆಂಪು ಸಾಹಿತ್ಯ ಚಲಾವಣೆಯಾಗುತ್ತಿದೆ. ಈ ಬಹು ಸಾಂಸ್ಕೃತಿ ಯನ್ನು ನಾವೆಲ್ಲರು ಒಕ್ಕೂರಲಿನಿಂದ ಒಪ್ಪುವ ಕುವೆಂಪು ಆಶಯಗಳನ್ನು ಕಾಪಾಡಬೇಕಾದ ಬಹು ದೊಡ್ಡ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ.ರಾಮಲಿಂಗಪ್ಪ ಟಿ.ಬೇಗೂರು ಅವರು ನಮ್ಮ ದೇಶದಲ್ಲಿ 3೦೦ಕ್ಕೂ ಹೆಚ್ಚು ರಾಮಾಯಣಗಳು ರಚನೆಯಾಗಿವೆ. ಅಲ್ಲದೆ ಏಷ್ಯಾ ಖoಡದ ಇತರೆ ರಾಷ್ಟçಗಳಲ್ಲಿಯೂ ರಾಮಾಯಣಗಳಿದ್ದು, ಅವೆಲ್ಲವುಗಳಿಗಿಂತ ಭಿನ್ನವಾದ ಮತ್ತು ಜನಪರವಾದ, ವೈಚಾರಿಕವಾದ ಅಂಶಗಳನ್ನು ಒಳಗೊಂಡ ಶ್ರೇಯ ನಮ್ಮ ಕುವೆಂಪು ಅವರ ರಾಮಾಯಣಕ್ಕೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕ ವಿಶ್ವೇಶ್ವರಯ್ಯ, ದೊಡ್ಡಹನುಮಯ್ಯ, ಕನ್ನಡ ವಿಭಾಗದ ಮುಖ್ಯಸ್ಥ ಕೆ.ರವಿಚಂದ್ರ, ಎಚ್.ಇ.ರವಿಕುಮಾರ್, ಸಾದಿಕ್ ಪಾಶಾ, ಬೊಮ್ಮೇಕಲ್ಲು ವೆಂಕಟೇಶ್, ಶರಣಬಸಪ್ಪ, ಈರಣ್ಣ, ಸಂಗೀತಾ, ಶ್ರೀನಿವಾಸ್ ಆಚಾರ್, ಶ್ರೀನಿವಾಸಪ್ಪ, ಸಂಗೀತಾ ಅರ್ಜುನ್ಗೌಡ, ಹರೀಶ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಜಯಪ್ರಕಾಶ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.