ಬೆಂಗಳೂರು: ಆಡುಗೋಡಿ ವಾರ್ಡ್ನ ಗ್ರಾಮದೇವತಾ ಬೀದಿಯಲ್ಲಿ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಶ್ರೀ ಪ್ಯಾಟ್ರಿಕ್ ರಾಜು ಅವರು ಟೀಮ್ RLR, LCB BTM ನೈಟಿಂಗೇಲ್ ಮತ್ತು ನಾರಾಯಣ ನೇತ್ರಾಲಯದ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಆಯೋಜಿಸಿದ್ದರು.
ಈ ಶಿಬಿರವನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಹಾಗೂ ಲಯನ್ಸ್ ಇಂಟರ್ನ್ಯಾಷನಲ್ನ ಡಿಸಿ ಮಹಿಳಾ ಸಬಲೀಕರಣದ ಚಾಮುಂಡೇಶ್ವರಿ ಅವರು ಉದ್ಘಾಟಿಸಿದರು.

ಒಟ್ಟು 377 ಜನರಿಗೆ ಕಣ್ಣಿನ ತಪಾಸಣೆ ಮಾಡಲಾಯಿತು, ಅದರಲ್ಲಿ 13 ಜನರನ್ನು ಕಣ್ಣಿನ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗಿದ್ದು, ಉಳಿದ 35 ಜನರಿಗೆ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ದಿನಾಂಕ ನಿಗದಿಪಡಿಸಲಾಗುವುದು ಮತ್ತು 222 ಜನರಿಗೆ ಶೀಘ್ರದಲ್ಲಿ ಕನ್ನಡಕ ವಿತರಿಸಲಾಗುವುದು.
RGUHS ಸೆನೆಟ್ ಸದಸ್ಯ ಡಾ. ಶ್ರೀನಿವಾಸನ್ ವೇಲು, ಡಾ. ಹೇಮಾವತಿ ಶ್ರೀನಿವಾಸನ್, LCB-BTM ನೈಟಿಂಗೇಲ್ ಅಧ್ಯಕ್ಷೆ ವಸಂತ, ಮಾಜಿ ಕಾರ್ಪೊರೇಟರ್ಗಳಾದ ಮುರುಗೇಶ್ ಮೊದಲಿಯಾರ್, ಮಂಜುಳಾ ಸಂಪತ್, ಹೇಮಂತ್, ಗೋವರ್ಧನ್ ರೆಡ್ಡಿ, ಆನಂದ್, ಹರೀಶ್ ಬಾಬು, BTM ಕ್ಷೇತ್ರದ ಎಲ್ಲಾ ಹಿರಿಯ ನಾಯಕರು ಮತ್ತು ಪ್ರದೇಶದ ನಾಯಕರು ಉಪಸ್ಥಿತರಿದ್ದರು.