ರಾಜಕೀಯ ಸುದ್ದಿ

ದೇಶಕ್ಕೋಸ್ಕರ ಬಲಿಯಾಗಲು ನೂರಕ್ಕೆ ನೂರು ಸಿದ್ದನಿದ್ದೇನೆ: ಜಮೀರ್ ಪುನರುಚ್ಚಾರ

Share It

ಕಲಬುರಗಿ : ಪಾಕಿಸ್ತಾನದ ವಿರುದ್ದ ಕೇಂದ್ರ ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡ್ರು ನಮ್ಮ ಬೆಂಬಲ ಇದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ.
ನಮ್ಮ ಪಕ್ಷದಿಂದ ಬೆಂಬಲವಿದೆ ಅಂತ ಘೋಷಿಸಿದ್ದಾರೆ ಎಂದರು.

ಜಮೀರ್ ಯುದ್ದಕ್ಕೆ ಹೋಗುವುದು ಬೇಡ, ಇಲ್ಲಿರುವ ಕುನ್ನಿಗಳನ್ನ ಕೊಲ್ಲಲಿ ಅಂತ ಸಿಟಿ ರವಿ ಹೇಳಿದ್ದರು. ಅದಕ್ಕೂ ಪ್ರತ್ಯುತ್ತರ ಕೊಟ್ಟ ಜಮೀರ್, ನಾನು ಈಗಲೂ ನನ್ನ ಹೇಳಿಕೆಗೆ ಬದ್ದನಿದ್ದೇನೆ. ನಾನು ಆತ್ಮಾಹುತಿ ಬಾಂಬ್ ಕಟ್ಟಿಕೊಂಡು ಯುದ್ಧಕ್ಕೆ ಹೋಗುತ್ತೇನೆ. ಸಿ.ಟಿ ರವಿಗೆ ಕೆಲಸ ಇಲ್ಲ ಅದಕ್ಕಾಗಿ ಹೀಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದ್ರು.

ಜಮೀರ್ ಇದಕ್ಕೂ ಮೊದಲು ಬಾಂಬ್ ಕಟ್ಟಿಕೊಂಡು ಗಡಿಗೆ ಹೋಗುತ್ತೇನೆ ಎಂದಿದ್ದರು. ಜಮೀರ್ ಮಾತಿಗೆ ಕೇಂದ್ರ ಆಹಾರ ಸಚಿವ ಪ್ರಲ್ಹಾದ್ ಜೋಶಿ ಟಾಂಗ್​ ಕೊಟ್ಟಿದ್ದರು. ಜಮೀರ್ ಶಾಂತವಾಗಿದ್ದರೆ ಸಾಕು. ನೀವೇನೂ ಮಾಡೋದು ಬೇಡ. ಮಿಲಿಟರಿಯನ್ನ ನಂಬಿ ಸುಮ್ಮನಿರಿ. ನಿಮ್ಮ ಭಾಷಣ ಬೇಡ, ನೀವು ಹೋಗೋದು ಬೇಡ. ಸೈನ್ಯದ ಶಕ್ತಿ, ಸೈನಿಕರು, ಇಂಟಲಿಜೆನ್ಸ್ ಬಗ್ಗೆ ವಿಶ್ವಾಸವಿಡಿ ಹೇಳಿಕೆಗಳನ್ನ ಕೊಡದೆ ಬಾಯಿ ಮುಚ್ಚಿಕೊಂಡಿದ್ದರೆ ಸಾಕು. ಜಮೀರ್ ಶಾಂತವಾಗಿರೋದೆ ದೇಶಕ್ಕೆ ಮಾಡೋ ದೊಡ್ಡ ಸೇವೆ ಎಂದ ವ್ಯಂಗ್ಯವಾಡಿದ್ದರು.

ಜಮೀರ್ ಸೈನ್ಯದ, ಸೈನಿಕರ ಆತ್ಮ ಸ್ಥೈರ್ಯ ಕುಗ್ಗಿಸದೆ ಸುಮ್ಮನಿದ್ದರೆ ಸಾಕು. ಇಲ್ಲ ಸಲ್ಲದ ಹೇಳಿಕೆ‌ ಕೊಡುವುದನ್ನು ಬಿಟ್ಟರೆ ಸಾಕು. ಬಾಂಬ್ ಕಟ್ಟಿ ಪಾಕಿಸ್ತಾನಕ್ಕೆ ಹೋಗಿ ಹೋರಾಡೋ ಬದಲು ನಿಮ್ಮ ಕೆಲಸ ನೀವು ಮಾಡಿ. ಸುಮ್ಮನೇ ಇದ್ದಾರೆ ಸಾಕು ಎಂದು ಜಮೀರ್​​ಗೆ ಜೋಶಿ ಟಕ್ಕರ್ ಕೊಟ್ಟಿದ್ದರು.


Share It

You cannot copy content of this page