ಬಳ್ಳಾರಿ: ಸಾರಿಗೆ ಇಲಾಖೆಯ ಲಕ್ಷಾಂತರ ರೂಪಾಯಿ ಹಣ ಟ್ರೆಜರಿ ಯಲ್ಲಿ ಜಮಾ ಆಗದಿರುವ ಪ್ರಕರಣ ಸಂಬಂಧ ಅಧಿಕಾರಿಯನ್ನು ಅಮಾನತು ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ.
ಬಳ್ಳಾರಿ ಪ್ರಾದೇಶಿಕ ಸಾರಿಗೆ ಇಲಾಖೆ ಯಲ್ಲಿ ಸರ್ಕಾರದ ಖಜಾನೆ ಗೆ ಜಮಾ ಮಾಡಬೇಕಾಗಿದ್ದ ಲಕ್ಷಾಂತರ ಹಣ ಒಂದು ವಾರದಿಂದ ಜಮಾ ಮಾಡಿರುವುದಿಲ್ಲ. ರವಿ ತವರಕೆರೆ ಹಣಕಾಸಿನ ಸೆಕ್ಷನ್ ನಿರ್ವಹಣೆ ಮಾಡುತ್ತಿದ್ದು, ಇವರು ಹಣ ಸಂದಾಯ ಮಾಡಿಲ್ಲ ಎನ್ನಲಾಗಿದೆ.
ಆದರೆ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ದೂರಿಗೆ ಸಂಬಂಧಪಟ್ಟಂತೆ, ಸಾರಿಗೆ ಸಚಿವರು ಕೂಡಲೇ ಸದರಿ ಸಿಬ್ಬಂದಿಯನ್ನು ಅಮಾನತು ಮಾಡಿ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು , ಹಾಗೂ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸಿದ್ದಾರೆ.