ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಸಿಂಗಾಪುರ್ ನ ಕಂಟೈನರ್ ಶಿಫ್ ವೊಂದು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಆರು ಜನರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಶ್ರೀಲಂಕಾದಿಂದ ಮುಂಬೈಗೆ ತೆರಳುತ್ತಿದ್ದಬೀ ಕಂಟೈನರ್ ಶಿಫ್ ಕೇರಳದ ಸಮುದ್ರ ಭಾಗದಲ್ಲಿ ಬೆಂಕಿಗೆ ಆಹುತಿಯಾಗುತ್ತಿರುವುದು ಕಂಡು ಬಂದಿತ್ತು. ತಕ್ಷಣವೇ ಸಹಾಯಕ್ಕೆ ಧಾವಿಸಿದ ಭಾರತೀಯ ನೌಕಪಡೆ ಬೆಂಕಿಯಿಂದ ಅಲ್ಲಿದ್ದ ಸಿಬ್ಬಂದಿಯನ್ನು ರಕ್ಷಿಸಿ, ಮಂಗಳೂರು ಕಡಲ ತೀರಕ್ಕೆ ಕರೆತಂದಿದ್ದರು.
ಸಮುದ್ರ ತೀರದಿಂದ ಅವರನ್ನು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆರು ಜನರ ಪೈಕಿ ಇಬ್ಬರ ಸ್ಥಿತಿ ಗಂಭಿರವಾಗಿದ್ದು, ಶೇ. 40 ಕ್ಕಿಂತ ಅಧಿಕ ಸುಟ್ಟ ಗಾಯಗಳಾಗಿವೆ. ಶ್ವಾಸಕೋಶದಲ್ಲಿಯೂ ಸುಟ್ಟ ಗಾಯಗಳಿವೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.