ಬೇಲೂರು: ಭಾರಿ ಮಳೆಯಿಂದಾ ಬೇಲೂರು-ಮೂಡಿಗೆರೆ ನಡುವಿನ ರಸ್ತೆಯಲ್ಲಿ ಸಂಚಾರ ದಟ್ಟಣೆ ಸ್ಥಗಿತಗೊಂಡಿದೆ.
ಭಾನುವಾರ ದಿನವಿಡಿ ಮಳೆ ಸುರಿಯುತ್ತಿದ್ದು, ರಸ್ತೆಯಲ್ಲಿ ಕೆಲ ಮರಗಳು ಮುರಿದುಬಿದ್ದಿವೆ. ಗೋಣಿಬೀಡು ಸಮೀಪದಲ್ಲಿ ಮರಬಿದ್ದ ಪರಿಣಾಮವಾಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ ಎನ್ನಲಾಗಿದೆ.
ಮೂಡಿಗೆರೆ, ಧರ್ಮಸ್ಥಳ ಕಡೆಯಿಂದ ಹಾಸನ, ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ಇದರಿಂದ ಅಡಚಣೆಯುಂಟಾಗಿದ್ದು, ವಾಹನ ಸವಾರರು ಗಂಟೆಗಟ್ಟಲೇ ರಸ್ತೆಯಲ್ಲಿ ವಾಹನದಲ್ಲಿಯೇ ಕುಳಿತು ಕಾಲ ಕಳೆಯುವಂತಾಗಿದೆ.