ಅಣ್ಣಿಗೇರಿ : ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ಅಂಗವಾಗಿ ಇಂದು ಜೂ. 16ರಂದು ಅಣ್ಣಿಗೇರಿ ತಹಸೀಲ್ದಾರ ಕಾರ್ಯಾಲಯ ದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು. ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಣ್ಣಿಗೇರಿ ತಾಲೂಕು ಅಧ್ಯಕ್ಷರು ಆದ ಶ್ರೀ ಸಿ ಎಂ ವೇರಣೆಕರ ಮನವಿ ಸಲ್ಲಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮಾತನಾಡಿ, 60 ವರ್ಷ ಮೇಲ್ಪಟ್ಟ ಯಾವುದೇ ನಾಗರಿಕರು ಹಿರಿಯ ನಾಗರಿಕರಾಗಿರುತ್ತಾರೆ. ದೇಶದಲ್ಲಿ 20 ಕೋಟಿ ಹಿರಿಯ ನಾಗರಿಕರು ಇದ್ದರೆ, ರಾಜ್ಯದಲ್ಲಿ 80 ಲಕ್ಷ ಇದ್ದೇವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿರುವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ವಿಶ್ವಸಂಸ್ಥೆಯು ಪ್ರತಿವರ್ಷ ಜೂ. 15ರಂದು ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ನಡೆಸಿ, ಸಮಾಜ ಹಾಗೂ ಹಿರಿಯ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಹೇಳಿದೆ.
ಆದರೆ ಪ್ರಸ್ತುತವಾಗಿ ಸರ್ಕಾರ ಹಾಗೂ ಸಮಾಜಗಳು ವಿಶ್ವಸಂಸ್ಥೆಯ ಈ ಘೋಷಣೆಯ ಉದ್ದೇಶವನ್ನು ಅರಿತುಕೊಳ್ಳದ ಕಾರಣ ಜೂ. 16ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಕಚೇರಿ ಎದುರು ಸತ್ಯಾಗ್ರಹ ಹಮ್ಮಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.ಪ್ರಮುಖವಾಗಿ ಕೇಂದ್ರ ಸರ್ಕಾರಕ್ಕೆ ರಾಷ್ಟ್ರದ ಎಲ್ಲ ಹಿರಿಯ ನಾಗರಿಕರನ್ನು ದೇಶದ ಸಂಪತ್ತು ಎಂದು ಘೋಷಣೆ ಮಾಡಬೇಕು.
ಆರ್ಥಿಕವಾಗಿ ದುರ್ಬಲರಾದ ಎಲ್ಲ ಹಿರಿಯ ನಾಗರಿಕರಿಗೆ ಮಾಸಿಕ ₹10 ಸಾವಿರ ವೃದ್ದಾಪ್ಯ ವೇತನ ನೀಡಬೇಕು. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕವಾದ ಮಂತ್ರಾಲಯ, ಸಚಿವರನ್ನು ನೇಮಕ ಮಾಡಬೇಕು. ಹಿರಿಯ ನಾಗರಿಕರ ತಡೆಹಿಡಿದ ರೈಲ್ವೆ ರಿಯಾಯಿತಿ ತಕ್ಷಣ ಆರಂಭಿಸಬೇಕು. ಆಯುಷ್ಮಾನ್ ಭಾರತ ಹಿರಿಯ ನಾಗರಿಕರ ಆರೋಗ್ಯ ವಿಮೆ ಕಾರ್ಡನ್ನು ಸಕ್ರಿಯಗೊಳಿಸುವಂತೆ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಶ್ರೀ ವಿ ಡಿ ಅಂದಾನಿಗೌಡ್ರ. ಸಿ ಆರ್ ಚಾಕಲಬ್ಬಿ, ಎಫ್ ಎಂ ಕಪ್ಪತ್ತನವರ, ಎಚ್ ಡಿ ಡಬರಿ, ಏನ್ ಏನ್ ರಾವುತ, ಬಸಯ್ಯ ಹಿರೇಮಠ, ಆರ್ ಎಂ ಜಗತಾಪ, ಎಲ್ ಎಂ ಹೊಸಳ್ಳಿ, ವಿ ವಿ ಗಿರಡ್ಡಿ, ಸಿ ಎಸ್ ಹೊಳೆಯನ್ನವರ, ಎಂ ಬಿ ಕಾಕನಗರ, ಬಾಳಪ್ಪ ನರಗುಂದ,ಎಂ ಎಂ ಮೀಶಿಯವರ, ವಿ ಡಿ ಗಣೇಶಕರ, ಡಿ ಬಿ ಕಳ್ಳಿಮನಿ, ಪಾರ್ವತೆವ್ವಾ ಕಿತ್ತೂರು, ಚನ್ನಮ್ಮ ನವಲಗುಂದ, ಶಾಂತವ್ವ ಹೊಂಬಾಳಿಮಠ ಮುಂತಾದವರು ಇದ್ದರು.ಶ್ರೀ ಕುನ್ನಿಬಾವಿ ಮನವಿ ಸ್ವೀಕರಿಸಿ ಸರಕಾರದ ಗಮನಕ್ಕೆ ತರಲಾಗುವದು ಎಂದರು. ನೂರಕ್ಕೂ ಹೆಚ್ಚು ಹಿರಿಯ ನಾಗರಿಕರು ಸೇರಿದ್ದರು.