ಬೆಂಗಳೂರು: ಈಜಿಪುರ ವಾರ್ಡಿನಲ್ಲಿ ಶಾಸಕರ ವಿಶೇಷ ಅನುದಾನದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಪೂಜೆ ನೆರವೇರಿಸಿದರು.
ಎನ್.ಜಿವಿ ಹೌಸಿಂಗ್ ಕಾಂಪ್ಲೆಕ್ಸ್ನಲ್ಲಿ ಶಿಂಶಾ ಬ್ಲಾಕ್, ಕುಮಾರಧಾರಾ ಬ್ಲಾಕ್, ಕಾವೇರಿ ಬ್ಲಾಕ್ ಮತ್ತು ಜೂಡಿಷಿಯಲ್ ಬ್ಲಾಕ್ ಸುತ್ತಲಿನ ರಸ್ತೆಗಳ ಡಾಂಬರೀಕರಣ ಕಾಮಗಾರಿ, ಶ್ರೀನಿವಾಗಿಲು ಮುಖ್ಯ ರಸ್ತೆಯಿಂದ ಎಸ್.ಟಿ ಬೆಡ್ ಬಡಾವಣೆ ಗಣೇಶ ದೇವಸ್ಥಾನವರೆಗೆ ಬಿ.ಡಬ್ಲ್ಯೂಎಸ್ಎಸ್ ಬಿ 400 ಮತ್ತು 300 ಎಂಎಂ ಡಾಯಾ ಎನ್ಪಿ-3 ಆರ್ಸಿಸಿ ಸ್ಯಾನಿಟರಿ ಪೈಪ್ಲೈನ್ ಅಳವಡಿಸುವ ಕಾಮಗಾರಿ, ಇದರ ವೆಚ್ಚ 31 ಲಕ್ಷ ರು. ಆಗಿದ್ದು, ಇದಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ, ಮಾಜಿ ಕಾರ್ಪೊರೇಟರ್ ಚಂದ್ರಪ್ಪ, ಬ್ಲಾಕ್ ಅಧ್ಯಕ್ಷ ಗೋವರ್ಧನ ರೆಡ್ಡಿ, RWA ಅಧ್ಯಕ್ಷರು ಮಲ್ಲಪ್ಪ ಕಲೆ, ರಾಜೇಂದ್ರ ಬಾಬು, ವೆಂಕಟೇಶ್, ಮಹದೇವ, ಕುಮಾರ್ ಗೌಡ, ಎನ್ಜಿವಿ ಹೌಸಿಂಗ್ ಕಾಂಪ್ಲೆಕ್ಸ್, ಶ್ರೀನಿವಾಗಿಲು, ಐಶ್ವರ್ಯ ಅಪಾರ್ಟ್ಮೆಂಟ್ ಹಾಗೂ ಎಸ್ಟಿ ಬೆಡ್ ಬಡಾವಣೆ ನಿವಾಸಿಗಳು, ಈಜಿಪುರ ವಾರ್ಡ್ ನ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.