ಅಪರಾಧ ರಾಜಕೀಯ

ಅಶ್ಲೀಲ ವಿಡಿಯೋ ಕೇಸ್: ಮಂಗಳೂರು ಏರ್ಪೋರ್ಟಿಗೆ ಮಧ್ಯಾಹ್ನ ಪ್ರಜ್ವಲ್ ಆಗಮನ!

Share It

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ಎಸ್.ಐ.ಟಿ ತನಿಖೆ ಬಿರುಸಾಗಿ ಸಾಗಿದೆ.

ಈಗಾಗಲೇ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಎಸ್ಐಟಿ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದೆ‌. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ರೇವಣ್ಣ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಇದಕ್ಕಾಗಿ ಎಸ್ಐಟಿ ತನಿಖಾ ತಂಡ ಪ್ರಜ್ವಲ್ ರೇವಣ್ಣ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲೇ ಬೀಡುಬಿಟ್ಟು ಆತನನ್ನು ಬಂಧಿಸಲು ಸಜ್ಜಾಗಿದೆ‌.

ಈ ಸುದ್ದಿ ಎಸ್ಐಟಿ ತನಿಖಾ ತಂಡದಿಂದಲೇ ಗೊತ್ತಾಗಿರುವ ಕಾರಣ ಇಂದು ಸಂಜೆಯೊಳಗೆ ಪ್ರಜ್ವಲ್ ರೇವಣ್ಣ ವಿದೇಶದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ನಂತರ ಅವರು ಬಂಧನಕ್ಕೊಳಗಾಗುವುದು ಖಚಿತವಾಗಿದೆ.

ಈ ರೀತಿ ಪ್ರಜ್ವಲ್ ರೇವಣ್ಣ ದಿಢೀರ್ ವಿದೇಶದಿಂದ ಬಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಸ್ಐಟಿ ತನಿಖಾ ತಂಡಕ್ಕೆ ಶರಣಾಗುವಂತೆ ಕಳೆದ ಶನಿವಾರ ರಾತ್ರಿಯೇ ತಂದೆ ಶಾಸಕ ಎಚ್.ಡಿ.ರೇವಣ್ಣ ಮೊಬೈಲ್ ಫೋನ್ ಕರೆ ಮಾಡಿ ಪುತ್ರ ಪ್ರಜ್ವಲ್ ಗೆ ದಬಾಯಿಸಿದ್ದಾರೆ ಎಂದು ತಿಳಿದುಬಂದಿದೆ.


Share It

You cannot copy content of this page