ಅಪರಾಧ ರಾಜಕೀಯ ಸುದ್ದಿ

ಮಹಿಳಾ ಅಧಿಕಾರಿಗೆ ನಿಂದನೆ ಪ್ರಕರಣ: ರಾಜೀವ್ ಗೌಡ ಉಚ್ಛಾಟನೆಗೆ ಶಿಫಾರಸು

Share It

ಬೆಂಗಳೂರು: ಶಿಡ್ಲಘಟ್ಟದ ಪುರಸಭೆ ಅಧಿಕಾರಿಗೆ ನಿಂಧಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ರಾಜೀವ್ ಗೌಡ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಶಿಸ್ತುಸಮಿತಿ ಶಿಫಾರಸು ಮಾಡಿದೆ.

ಪ್ರಕರಣದಲ್ಲಿ ಅವರನ್ನು ಬಂಧಿಸದೆ ಪೊಲೀಸರು ಮೀನಾಮೇಷ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪೋಸ್ಟರ್ ಅಭಿಯಾನ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಶಿಸ್ತು ಸಮಿತಿ, ಅವರ ಉಚ್ಛಾಟನೆಗೆ ಶಿಫಾರಸು ಮಾಡಿದೆ.

ಜಿ.ಸಿ.ಚಂದ್ರಶೇಖರ್ ನೊಟೀಸ್ ನೀಡಿ, ಪ್ರಕರಣದ ಸಂಬAಧ ಸಮಜಾಯಿಷಿ ನೀಡುವಂತೆ ಸೂಚಿಸಿದ್ದರು. ಆದರೆ, ತಲೆ ಮರೆಸಿಕೊಂಡಿರುವ ರಾಜೀವ್ ಗೌಡ, ಈವರೆಗೆ ಯಾವುದೇ ಉತ್ತರ ನೀಡಿಲ್ಲ. ಹೀಗಾಗಿ, ಉಚ್ಛಾಟನೆಗೆ ಶಿಫಾರಸು ಮಾಡಲಾಗಿದೆ.


Share It

You cannot copy content of this page