ವೈಟ್ ನ್ಯೂಸ್ ಅಣ್ಣಿಗೇರಿ
ವರದಿ:ಮಹಾಂತೇಶ ಅಕ್ಕರಕಿ,
ಅಣ್ಣಿಗೇರಿ: ತಾಲೂಕಿನಲ್ಲಿ ಶಾಸಕ ಕೋನರಡ್ಡಿ ಅವರು ಮಾಡಿರುವ ಚಕ್ಕಡಿ ದಾರಿಗಳ ಕಾರ್ಯ ಮಾದರಿಯಾಗಿದೆ ಎಂದು ಅಣ್ಣಿಗೇರಿ ಲ್ಯಾಂಡಲಾರ್ಡ ಶರಣ ಬಸಪ್ಪ ದೇಶಮುಖ ಹೇಳಿದರು.
ಅಣ್ಣಿಗೇರಿಯ ವೈಟ್ ಹೌಸ್ ನಿವಾಸದ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಣ್ಣಿಗೇರಿಯ ಅಡವಿ ಆರಾಧ್ಯದೈವತೆ ಕೋಳಿವಾಡ ಭದ್ರಾಪುರ ನಲವಡಿ ಹಾಗೂ ಸುತ್ತ ಮುತ್ತಲಿನ ಊರಿನ ಭಕ್ತರ ಆರಾಧ್ಯದೇವಿಯ ಕೋರಮ್ಮ ಮಾನೆಯು 35 ವರ್ಷಗಳಿಂದ ನೆನೆಗುದಿಗೆ ಬಿದ್ದತ್ತು. ಹಿಂದೆ ಹಲವಾರು ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಕಾರ್ಯ ಆಗಿದಿಲ್ಲ ಎಂದರು.
ಕ್ಷೇತ್ರದ ಶಾಸಕ ಎನ್ ಎಚ್ ಕೋನರಡ್ಡಿ ಅವರಿಗೆ ರೈತರೋಂದಿಗೆ ಮನವಿ ಸಲ್ಲಿಸಿದಾಗ ಸ್ಪಂದಿಸಿದ ಶಾಸಕರು ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 2 ಕೀಲೋ ಮೀಟರ ಮೊಹರಮ್ ರಸ್ತೆ ನಿರ್ಮಿಸಿ ಭಕ್ತಾಧಿಗಳಿಗೆ ರೈತರಿಗೆ ಶಾಸಕ ಎನ ಎಚ್ ಕೋನರಡ್ಡಿ ಪಕ್ಷಾತೀತವಾದ ನಾಯಕರಾಗಿದ್ದಾರೆ ಎಂದು ಹೇಳಿದರು. ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ ಅವರ ಶಾಸಕರಿಗೆ ವಿಶೇಷ ರೈತ ಕೋಟಾದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಣ್ಣಿಗೇರಿ ಲ್ಯಾಂಡ ಲಾರ್ಡ ಶರಣ ಬಸಪ್ಪ ದೇಶಮುಖ, ಈಶ್ವರ ಕಾಳಪ್ಪನವರ, ಕಲ್ಲಪ್ಪ ಗಾಮನಗಟ್ಟಿ.ಹಸನಸಾಬ ಲೋಕಾಪುರಿ, ಮಹಾದೇವಯ್ಯ ಹಿರಿಮಠ ಹಾಗೂ ರೈತರು ಇದ್ದರು.

