ಫ್ಯಾಷನ್ ರಾಜಕೀಯ ಸಿನಿಮಾ ಸುದ್ದಿ

Bigboss ಗೆ ಅನುಮತಿ ಇಲ್ಲ, ಲೋಪಗಳ ಸರಿಪಡಿಸದಿದ್ದರೆ ಶೋ ಇಲ್ಲ:ಬಿಗ್ ಬಾಸ್’ ಸೀಸನ್ 13ಕ್ಕೆ ಸಚಿವ ರಾಮಲಿಂಗಾರೆಡ್ಡಿ ತಡೆ

Share It

‘ಬಿಗ್ ಬಾಸ್ ಕನ್ನಡ’ದ ಹೊಸ ಸೀಸನ್ ವೀಕ್ಷಕರಿಗೆ ಸಿಹಿ ಕನಸು ತೋರಿಸುತ್ತಿರುವಾಗಲೇ ಅನಿರೀಕ್ಷಿತ ಸಂಕಷ್ಟವೊಂದು ಎದುರಾಗಿದೆ. ಸೆಪ್ಟೆಂಬರ್ 6 ರಿಂದ ಆರಂಭವಾಗಲಿರುವ ‘ಬಿಗ್ ಬಾಸ್ ಸೀಸನ್ 13’ಗೆ ರಾಜ್ಯದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಅವರು ಅನುಮತಿ ನೀಡಲು ನಿರಾಕರಿಸಿದ್ದಾರೆ.

ಕಳೆದ ವರ್ಷ ಪರಿಸರ ನಿಯಮ ಉಲ್ಲಂಘನೆಯಿಂದಾಗಿ ಅರ್ಧದಲ್ಲೇ ಶೋ ನಿಲ್ಲಿಸಲಾಗಿತ್ತು. ಈ ಬಾರಿ ಜಾಲಿವುಡ್ ಸ್ಟುಡಿಯೋದಲ್ಲಿ ಸೆಟ್ ನಿರ್ಮಾಣವಾಗಿದ್ದು, ‘ಫ್ಲೈಯಿಂಗ್ ಥೀಮ್’ನಲ್ಲಿ ನೂತನ ‘ದೊಡ್ಮನೆ ಆಟ’ ಸಿದ್ಧಗೊಳಿಸಲಾಗಿದೆ. ಆದರೆ, ಸಚಿವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಪ್ರಸ್ತುತ ಆಯೋಜಕರಿಗೆ ಯಾವುದೇ ಪರಿಸರ ಅನುಮತಿ ಇಲ್ಲ ಎಂದು ತಿಳಿಸಿದ್ದಾರೆ.

“ಜಾಲಿವುಡ್ ಸಂಸ್ಥೆಯವರು ‘ಬಿಗ್ ಬಾಸ್’ ಆಯೋಜಿಸಲು ಅಗತ್ಯವಾದ ಅನುಮತಿಯನ್ನು ಪಡೆದುಕೊಂಡಿಲ್ಲ. ಕಳೆದ ವರ್ಷದ ದಂಡವೂ ಇನ್ನೂ ಪಾವತಿಯಾಗಿಲ್ಲ” ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. “ಇದರೊಂದಿಗೆ, ಪರಿಸರ ನಿಯಮಗಳು ಮತ್ತು STP (Sewage Treatment Plant) ಅಳವಡಿಕೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲಾಗಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಲಾಗುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.

ಇದುವರೆಗೂ ಆಯೋಜಕರು ಅನುಮತಿಗಾಗಿ ಅರ್ಜಿಯನ್ನು ಸಲ್ಲಿಸಿಲ್ಲ. ಹಾಗಿದ್ದರೂ ಸೆಪ್ಟೆಂಬರ್ 6 ರಿಂದ ಶೋ ಪ್ರಸಾರ ಮಾಡುವ ಘೋಷಣೆ ಮಾಡಲಾಗಿದೆ. ಇದೀಗ ಅನುಮತಿಯಿಲ್ಲದೆ ಕಾರ್ಯಕ್ರಮವು ಹೇಗೆ ಮುನ್ನಡೆಯುತ್ತದೆ ಎಂಬ ಕುತೂಹಲ ಮೂಡಿದೆ. ಸಚಿವರು ನೀಡಿರುವ ಈ ಹೇಳಿಕೆಯು ವೀಕ್ಷಕರಿಗೆ ನಿರಾಶೆಯನ್ನು ತಂದಿದ್ದು, ಮುಂದಿನ ದಿನಗಳಲ್ಲಿ ಶೋ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗುತ್ತಿಲ್ಲ.


Share It

You cannot copy content of this page