ರಾಜಕೀಯ ಸುದ್ದಿ

ಸಿಎಂ ಆಯ್ಕೆ ಮಾಡಿದ್ದು ಶಾಸಕರು,ಡಿಸಿಎಂ ಆಗ್ಲಿ, ಹೈಕಮಾಂಡ್ ಆಗ್ಲಿ ಅಲ್ಲ:ಸಚಿವ ಕೆ.ಎನ್ ರಾಜಣ್ಣ

Share It

ಬೆಂಗಳೂರು :ರಾಜ್ಯದಲ್ಲಿ ಸಿಎಂ ಬದಲಾವಣೆ ಮತ್ತು ಹೆಚ್ಚುವರಿ ಡಿಸಿಎಂ ಹುದ್ದೆ ಕುರಿತು ಚರ್ಚೆಯಾಗುತ್ತಿದ್ದು ಈ ಬಗ್ಗೆ ಚರ್ಚೆ ಮಾಡದಂತೆ ಡಿಸಿಎಂ ಡಿಕೆ ಶಿವಕುಮಾರ್ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೂ ಜಗ್ಗದ ಸಚಿವ ಕೆ.ಎನ್ ರಾಜಣ್ಣ , ಡಿಸಿಎಂ ಸ್ಥಾನ ಕೇಳಬಾರದಾ, ನಾವು ಕೇಳೋದು ತಪ್ಪಾ, ಚಂದ್ರಶೇಖರ ಶ್ರೀ ಹೇಳಿದ್ರೆ ಸಿಎಂ ಮಾಡೋಕೆ ಆಗುತ್ತಾ, ಸಿಎಂ ರಾಜೀನಾಮೆ ಕೊಡಲಿ ಅಂದ್ರೆ ನಾವು ಸುಮ್ಮನಿರನೇಕಾ ಎಂದು ಪ್ರಶ್ನಿಸಿದರು.

ಸಿಎಂ ಆಯ್ಕೆ ಮಾಡಿದ್ದು ಶಾಸಕರು ಹೈಕಮಾಂಡ್ ಅಲ್ಲ ಡಿ.ಕೆ. ಶಿವಕುಮಾರ್ ವಾರ್ನಿಂಗ್ ಗೆ ನಾನು ಹೆದರಲ್ಲ ಎಂದು ಸಚಿವ ರಾಜಣ್ಣ ತಿಳಿಸಿದರು.


Share It

You cannot copy content of this page