ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ತುಸು ಹೆಚ್ಚಿದೆ. ಆದರೆ ಜುಲೈ 24ರ ಬಳಿಕ ಕೊಂಚ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೀದರ್ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ.
ಆದಾಗ್ಯೂ ನಿನ್ನೆಯವರೆಗೆ ಕ್ಯಾಸಲ್ರಾಕ್, ಹೊನ್ನಾವರ, ಆಗುಂಬೆ, ಸಿದ್ದಾಪುರ, ಉಡುಪಿ, ಧರ್ಮಸ್ಥಳ, ಲಿಂಗನಮಕ್ಕಿ, ಕಮ್ಮರಡಿ, ಹುಂಚದಕಟ್ಟೆ, ಕೊಟ್ಟಿಗೆಹಾರ, ಕುಂದಾಪುರ, ಕುಮಟಾ, ಲೋಂಡಾ, ಕೊಪ್ಪದಲ್ಲಿ ಭಾರಿ ಮಳೆಯಾಗಿದೆ.
ಗೋಕರ್ಣ, ಕಾರ್ಕಳ, ಕೋಟ, ಭಾಲ್ಕಿ, ಕದ್ರಾ, ಜೋಯಿಡಾ, ಬನವಾಸಿ, ಬೆಳ್ತಂಗಡಿ, ಮಂಕಿ, ಕಿರವತ್ತಿ, ಸೋಮವಾರಪೇಟೆ, ಯಲ್ಲಾಪುರ, ಅಂಕೋಲಾ, ಶಿರಾಲಿ, ನಿಪ್ಪಾಣಿ, ತ್ಯಾಗರ್ತಿ, ಹಳಿಯಾಳ, ಬಾಳೆಹೊನ್ನೂರು, ಮಂಠಾಳ, ಆನವಟ್ಟಿ, ಮುಲ್ಕಿ, ಔರಾದ್, ಪುತ್ತೂರು, ಸೇಡಬಾಳ, ಎನ್ಆರ್ಪುರ, ಪೊನ್ನಂಪೇಟೆ, ಕಂಪ್ಲಿ, ಅರಕಲಗೂಡು, ಸುಳ್ಯ, ಸಂಕೇಶ್ವರ, ಗೋಕಾಕ್, ಕಲಘಟಗಿ, ಚಿಂಚೋಳಿ, ಹುಕ್ಕೇರಿ, ಕುಷ್ಟಗಿ, ರಾಯಭಾಗ, ಲಕ್ಷ್ಮೇಶ್ವರ, ಕಕ್ಕೇರಿ, ಸವಣೂರು, ಕಮಲಾಪುರ, ಕುಡತಿನಿ, ಚಿಕ್ಕಮಗಳೂರು, ಭದ್ರಾವತಿ, ಸಂಡೂರು, ತರೀಕೆರೆಯಲ್ಲಿ ಮಳೆಯಾಗಿದೆ.