ಅಪರಾಧ ಸುದ್ದಿ

ಗಜೇಂದ್ರಗಡ : KSRTC ಬಸ್ ಹಾಯ್ದು 31 ಕುರಿಗಳ ಸಾವು

Share It

ಗಜೇಂದ್ರಗಡ: ಬಸ್ ಹಾಯ್ದು 31 ಕುರಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಸಮೀಪದ ರಾಜೂರ ಗ್ರಾಮ‌ ಬಳಿಯ ದಿಂಡೂರ ಕ್ರಾಸ್ ನಲ್ಲಿ ಗುರುವಾರ ಸಂಜೆ ನಡೆದಿದೆ.

ಗಜೇಂದ್ರಗಡದಿಂದ ಬದಾಮಿ ಕಡೆಗೆ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್ ಮಾರ್ಗ ಮಧ್ಯದ ದಿಂಡುರ ಕ್ರಾಸ್ ಬಳಿ ರಸ್ತೆ ಮೇಲೆ ಸಂಚಾರಿಸುತ್ತಿದ್ದ ಕುರಿಗಳ ಗುಂಪಿನ ಮೇಲೆ ಹಾಯ್ದ ಪರಿಣಾಮ 31 ಕುರಿಗಳು ಸಾವನ್ನಪ್ಪಿವೆ.

ರೋಣ ತಾಲೂಕಿನ ಹಿರೇಹಾಳ ಗ್ರಾಮದ ಅಪ್ಪಣ್ಣ ಎಂಬುವವರಿಗೆ ಸೇರಿದ್ದ ಕುರಿಗಳು ಎಂದು ತಿಳಿದು ಬಂದಿದ್ದು, ಘಟನಾ ಸ್ಥಳಕ್ಕೆ ಗಜೇಂದ್ರಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.


Share It

You cannot copy content of this page