ಮೇ. ೩೧ಕ್ಕೆ ರ್ತಾರಂತೆ ಪ್ರಜ್ವಲ್ ರೇವಣ್ಣ ! ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ !
ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಕೊನೆಗೂ ಪ್ರತ್ಯಕ್ಷವಾಗಿದ್ದು, ವಿಡಿಯೋ ಮೂಲಕ ಮೇ.೩೧ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ಸಂದೇಶ ಕೊಟ್ಟಿದ್ದಾರೆ.
ವಿಡಿಯೋ ಸಂದೇಶದ ಮೂಲಕ ಮಾತನ್ನಾಡಿರುವ ಪ್ರಜ್ವಲ್ ರೇವಣ್ಣ, ನಾನು ವಿದೇಶಕ್ಕೆ ಹೋಗುವುದು ಮೊದಲೇ ನಿಗದಿಯಾಗಿತ್ತು. ಹೀಗಾಗಿ, ವಿದೇಶ ಪ್ರಯಾಣ ಬೆಳೆಸಬೇಕಾಯ್ತು. ವಿದೇಶದಲ್ಲಿ ನಾನು ಎಲ್ಲಿದ್ದೇನೆ ಎಂದು ಹೇಳದಿರುವುದಕ್ಕೆ ನಾನು ಪಕ್ಷದ ಕಾರ್ಯಕರ್ತರ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ನಾನು ವಿದೇಶಕ್ಕೆ ತೆರಳಿದ ನಾಲ್ಕು ದಿನದ ನಂತರ ನನಗೆ ಪ್ರಕರಣದ ಬಗ್ಗೆ ಮಾಹಿತಿ ಸಿಕ್ಕಿತು. ಎಸ್ಐಟಿ ನೊಟೀಸ್ ನೀಡಿರುವುದು ಕೂಡ ನನಗೆ ಆಗಲೇ ಗೊತ್ತಾಗಿದ್ದು, ಹೀಗಾಗಿ, ಎಸ್ಐಟಿ ಮುಂದೆ ಹಾಜರಾಗಲು ಸಾಧ್ಯವಾಗಿಲ್ಲ. ಇದೀಗ ಮೇ. ೩೧ಕ್ಕೆ ನಾನು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರೆ.
ತಾತನಿಗೆ ಕ್ಷಮೆ ಕೋರಿದ ಪ್ರಜ್ವಲ್ !: ವಿಡಿಯೋ ಆರಂಭ ಮಾಡುತ್ತಿದ್ದಂತೆ ನನ್ನ ತಂದೆ, ತಾಯಿ ಮತ್ತು ತಾತನಿಗೆ ಕ್ಷಮೆ ಕೋರುತ್ತೇನೆ. ಅದೇ ರೀತಿ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರ ಕ್ಷಮೆಯನ್ನೂ ಪ್ರಜ್ವಲ್ ಕೋರಿದ್ದಾರೆ. ಇದೆಲ್ಲ ರಾಜಕೀಯ ಷಡ್ಯಂತ್ರ ಎಂದು ಕೂಡ ಆರೋಪಿಸಿದ್ದು, ನನ್ನನ್ನು ರಾಜಕೀಯವಾಗಿ ಮುಗಿಸುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.